ದೇಶ ಸೇವೆಗೆ ಮರಳಿದ ಯೋಧ

A soldier who returned to serve his country

ಚಿಮ್ಮಡ: ನಿಶ್ಚಿತಾರ್ಥಕ್ಕೆಂದು ರಜೆಗೆ ಗ್ರಾಮಕ್ಕೆ ಆಗಮಿಸಿದ ಯೋಧ ದಾನೇಶ ಈಶ್ವರ ಹಳ್ಳೂರ ತುರ್ತು ಕರೆಯ ಮೇರೆಗೆ ರಜೆ ಮೊಟಕುಗೊಳಿಸಿ ಬುಧವಾರ ಮತ್ತೆ ಸೇವೆಗೆ ಮರಳಿದರು.

blank

ಕಳೆದ ಹದಿನೈದು ದಿನಗಳ ಹಿಂದೆ ರಜೆಗೆ ಆಗಮಿಸಿದ್ದ ಯೋಧ ದಾನೇಶ ಒಂದು ವಾರದ ಹಿಂದೆ ನಂದೇಶ್ವರದ ಶ್ರುತಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ರಜೆ ಇನ್ನೂ ಹದಿನೈದು ದಿನ ಇರುವಾಗಲೇ ದೇಶದ ಗಡಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡ ಹಿನ್ನೆಲೆಯಲ್ಲಿ ಸೇನಾ ಕಚೇರಿಯಿಂದ ತುರ್ತು ಕರೆ ಬಂದಿದ್ದರಿಂದ ಕರ್ತವ್ಯ ಸ್ಥಳವಾದ ಪಂಜಾಬ್‌ಗೆ ಮರಳಿದರು.

ಸ್ಥಳೀಯ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ದಾನೇಶ ಅವರನ್ನು ಸತ್ಕರಿಸಿ ಆಶೀರ್ವಾದಿಸಿದರು. ಕುಟುಂಬ ಸದಸ್ಯರು, ಸ್ನೇಹಿತರು ಭಾವುಕರಾಗಿ ಪುಪ್ಪವೃಷ್ಟಿಯೊಂದಿಗೆ ಬೀಳ್ಕೊಟ್ಟರು.

Share This Article
blank

ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ದೇಸಿ ಸೂಪರ್‌ಫುಡ್‌ ತಿನ್ನಿ | Immunity

Immunity: ಮಳೆಗಾಲ ಬಂತೆಂದರೆ ಸೋಂಕುಗಳು ಬರುವುದು ಸಹ ಸಹಜ. ತಂಪಾದ ಗಾಳಿಗೆ ಮನೆಗಳ ಸುತ್ತಲು ಬ್ಯಾಕ್ಟೀರಿಯಾ…

ಮಳೆಗಾಲದಲ್ಲಿ ಕಲುಷಿತ ಆಹಾರ, ನೀರಿನ ಮೂಲಕ ವೈರಸ್! ಎಚ್ಚರ ತಪ್ಪಿದರೆ ಅನಾರೋಗ್ಯ…monsoon

monsoon : ಮಳೆಗಾಲ  ಹವಾಮಾನದಲ್ಲಿನ ಬದಲಾವಣೆಗಳು  ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.  ಸೇವಿಸುವ ಆಹಾರ ಮತ್ತು…

blank