ಕೋರ್ಟ್​ ಆವರಣದಲ್ಲೇ ಅರೆ ಬೆತ್ತಲೆ ಸ್ಥಿತಿಯಲ್ಲಿ ಸಿಬ್ಬಂದಿ ಶವ ಪತ್ತೆ! ನಿನ್ನೆ ರಾತ್ರಿ ನಡೆದಿದ್ದೇನು?

ಹಾವೇರಿ: ರಾಣೇಬೆನ್ನೂರು ನಗರದ ಕೋರ್ಟ್​ ಆವರಣದಲ್ಲಿ ಅನುಮಾನಾಸ್ಪದವಾಗಿ ಕೋರ್ಟಿನ ಸಿಬ್ಬಂದಿಯೊಬ್ಬರು ನಿನ್ನೆ(ಭಾನುವಾರ) ರಾತ್ರಿ ಮೃತಪಟ್ಟಿದ್ದಾರೆ. ಅರೆಮಲ್ಲಾಪುರ ಗ್ರಾಮದ ನಿವಾಸಿ ರವಿಕುಮಾರ್ ಬೆನ್ನೂರ್ ಮೃತರು. ಮಾಜಿ ಸೈನಿಕರಾಗಿದ್ದ ರವಿಕುಮಾರ್​, ಕೋರ್ಟ್​ನಲ್ಲಿ ಜವಾನರಾಗಿ ಕೆಲಸ ಮಾಡುತ್ತಿದ್ದರು. ಭಾನುವಾರ ರಾತ್ರಿ ಎದೆನೋವು ಎಂದು ರವಿಕುಮಾರ್​ ಮನೆಗೆ ಕರೆ ಮಾಡಿ ಹೇಳಿದ್ದರು. ಬೆಳಗ್ಗೆ ಗೇಟ್ ಬಡಿದರೂ ಕೋರ್ಟ್​ನ ಬಾಗಿಲು ತೆಗೆದಿಲ್ಲ. ಬಾಗಿಲು ಮುರಿದು ಒಳ ಹೋಗಿ ನೋಡಿದಾಗ ರವಿಕುಮಾರ್​ರ ಶವ ಅರೆ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಸಿಪಿಐ ಮಹಂತೇಶಗೌಡ ನೇತೃತ್ವದ ತಂಡ … Continue reading ಕೋರ್ಟ್​ ಆವರಣದಲ್ಲೇ ಅರೆ ಬೆತ್ತಲೆ ಸ್ಥಿತಿಯಲ್ಲಿ ಸಿಬ್ಬಂದಿ ಶವ ಪತ್ತೆ! ನಿನ್ನೆ ರಾತ್ರಿ ನಡೆದಿದ್ದೇನು?