ಭಾರಿ ಮಳೆ: ಬೈಕ್ ಸಮೇತ ನೀರಲ್ಲಿ ಕೊಚ್ಚಿಹೋದ ದಂಪತಿ ಸಾವು

ವಿಜಯನಗರ: ಭಾರೀ ಮಳೆಗೆ ಹಳ್ಳದಲ್ಲಿ ಬೈಕ್​ ಸಮೇತ ದಂಪತಿ ಕೊಚ್ವಿ ಹೋಗಿ ದುರಂತ ಅಂತ್ಯ ಕಂಡ ಘಟನೆ ಹೂವಿನಹಡಗಲಿ ತಾಲೂಕಿನಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ. ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ-ಮುತ್ಕೂರು ಗ್ರಾಮದ ನಿವಾಸಿಗಳಾದ ಮಲ್ಲಿಕಾರ್ಜುನ (55) ಮತ್ತು ನಿರ್ಮಲಾ ಮೃತರು. ಇವರಿಬ್ಬರೂ ಬೈಕ್​ನಲ್ಲಿ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ತಳಕಲ್​ಗೆ ಹೋಗಿ ಮಂಗಳವಾರ ಸಂಜೆ ವಾಪಸ್ ಬರುತ್ತಿದ್ದರು. ಮಾರ್ಗಮಧ್ಯೆ ಹೂವಿನಹಡಗಲಿ ತಾಲೂಕಿನ ಪೂರ್ವ ಮತ್ತು ಪಶ್ಚಿಮ ಕಾಲ್ವಿ ಗ್ರಾಮಗಳ ಮದ ಇರೋ ಹಳ್ಳದ ಬಳಿ ಮಳೆ ನೀರಲ್ಲಿ ಕೊಚ್ಚಿಹೋಗಿದ್ದರು. … Continue reading ಭಾರಿ ಮಳೆ: ಬೈಕ್ ಸಮೇತ ನೀರಲ್ಲಿ ಕೊಚ್ಚಿಹೋದ ದಂಪತಿ ಸಾವು