ಮಾರಕಾಸ್ತ್ರ ಹಿಡಿದು ಸುಲಿಗೆ; ರೆಡ್ ಹ್ಯಾಂಡ್‌ ಆಗಿ ಹಿಡಿದ ಟ್ರಾಫಿಕ್ ಸಿಬ್ಬಂದಿ

ಬೆಂಗಳೂರು: ಉಪ್ಪಾರಪೇಟೆ ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ದರೋಡೆ ಪ್ರಯತ್ನ ತಪ್ಪಿದೆ. ಪೊಲೀಸರ ದಿಟ್ಟತನದ ಕಾರ್ಯಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವ್ಯಕ್ತಿಯೊಬ್ಬ ಮತ್ತೊಬ್ಬನ ಜತೆ ಸೇರಿ ಎರಡು ಉದ್ದನೆಯ ಲಾಂಗ್ ಹಿಡಿದು ದ್ವಿಚಕ್ರ ವಾಹನ ಸವಾರರನ್ನು ಅಡ್ಡ ಗಟ್ಟಿ ಹಲ್ಲೆ ನಡೆಸುವುದರ ಜತೆಗೆ ಹೆದರಿಸಿ 10000 ರೂ.ಗಳನ್ನು ದೋಚಿದ್ದಾನೆ. ಆ ಸಂದರ್ಭದಲ್ಲಿ ಪ್ಯಾಲೆಸ್ ರಸ್ತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಉಪ್ಪಾರಪೇಟೆ ಪೊಲೀಸ್ ಠಾಣೆಯ ಎಎಸ್ಐ. ರವೀಂದ್ರ ಅವರು ಹಾಗೂ ಎಚ್ ಸಿ. ಲಕ್ಷ್ಮಣಯ್ಯ ಮತ್ತು ಮರಿಸ್ವಾಮಿ ಬಂದಿದ್ದಾರೆ. … Continue reading ಮಾರಕಾಸ್ತ್ರ ಹಿಡಿದು ಸುಲಿಗೆ; ರೆಡ್ ಹ್ಯಾಂಡ್‌ ಆಗಿ ಹಿಡಿದ ಟ್ರಾಫಿಕ್ ಸಿಬ್ಬಂದಿ