ಯಕ್ಷಗಾನ ವೇಷ ಧರಿಸಿ ಸಂಭ್ರಮಿಸಿದ ಸಚಿವ ಡಾ.ಸುಧಾಕರ್!

ಭಟ್ಕಳ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಕೆಲ ಕ್ಷಣ ಯಕ್ಷಗಾನ ವೇಷಧಾರಿಯಾಗಿ ಸಂಭ್ರಮಿಸಿದರು. ಉತ್ತರ ಕನ್ನಡದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೌಲಭ್ಯ ಕಲ್ಪಿಸುವ ಸಂಬಂಧ ಆರೋಗ್ಯ ಸಚಿವ ಡಾ.ಸುಧಾಕರ್ ಮಂಗಳವಾರ ಆಗಮಿಸಿದ್ದರು. ಕಾರವಾರ, ಕುಮಟಾ, ಭಟ್ಕಳ‌ ಆಸ್ಪತ್ರೆಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳ ಸಭೆ ನಡೆಸಿದ್ದರು. ರಾತ್ರಿ ಭಟ್ಕಳ‌ ಶಾಸಕ ಸುನೀಲ‌ ನಾಯ್ಕ ಅವರ ಜಾಲಿಯ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ರಾತ್ರಿ ಶಾಸಕರ ಮನೆಯಲ್ಲೇ ಯಕ್ಷಗಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಗ ಸಚಿವರು ಯಕ್ಷಗಾನದ ವಸ್ತ್ರ, … Continue reading ಯಕ್ಷಗಾನ ವೇಷ ಧರಿಸಿ ಸಂಭ್ರಮಿಸಿದ ಸಚಿವ ಡಾ.ಸುಧಾಕರ್!