ರಾಮನಗರದಲ್ಲಿ ಗಂಡಸ್ತನದ ಹೇಳಿಕೆ: ಮೇಕೆದಾಟು ಪಾದಯಾತ್ರೆಯಲ್ಲಿ ಟ್ವಿಸ್ಟ್​ ಕೊಟ್ಟ ಡಿ.ಕೆ.ಸುರೇಶ್​

ಬೆಂಗಳೂರು: ಅಡೆತಡೆಗಳನ್ನು ದಾಟಿ ಬಂದ ಮೇಕೆದಾಟು ಪಾದಯಾತ್ರೆ ಗುರುವಾರ ಬಸವನಗುಡಿಯ ನ್ಯಾಷನಲ್​ ಕಾಲೇಜು ಮೈದಾನದಲ್ಲಿ ಸಂಪನ್ನಗೊಳ್ಳುತ್ತಿದ್ದು, ಈ ವೇಳೆ ಅಬ್ಬರಿಸಿ ಬೊಬ್ಬಿರಿಯುವ ಧಾವಂತದಲ್ಲಿ ಕಾಂಗ್ರೆಸ್​ ಇದೆ. ಕೊನೇ ದಿನದ ಪಾದಯಾತ್ರೆಯು ಇಂದು ಬೆಳಗ್ಗೆ ಅರಮನೆ ಮೈದಾನದಿಂದ ಹೊರಟಿದೆ. ರಾಮನಗರದ ಕಾರ್ಯಕ್ರಮದಲ್ಲಿ ಗಂಡಸ್ತನದ ಸವಾಲು ಹಾಕಿದ್ದ ಸಚಿವ ಡಾ. ಸಿ.ಎನ್​. ಅಶ್ವತ್ಥನಾರಾಯಣ್​ಗೆ ಎದಿರೇಟು ನೀಡಲು ಸಂಸದ ಡಿ.ಕೆ. ಸುರೇಶ್​ ಪಾದಯಾತ್ರೆ ಮಾರ್ಗವನ್ನೇ ಬದಲಿಸಿದ್ದಾರೆ. ಗುರುವಾರ ಪಾದಯಾತ್ರೆಯನ್ನು ಮಲ್ಲೇಶ್ವರದಲ್ಲಿ ಹಾದುಹೋಗುವಂತೆ ನೋಡಿಕೊಂಡಿದ್ದಾರೆ. ಮಲ್ಲೇಶ್ವರದಲ್ಲಿ ಜನಬಲ ಪ್ರದರ್ಶನಕ್ಕೂ ಕಾಂಗ್ರೆಸ್​ ತಯಾರಿ ನಡೆಸಿದೆ. … Continue reading ರಾಮನಗರದಲ್ಲಿ ಗಂಡಸ್ತನದ ಹೇಳಿಕೆ: ಮೇಕೆದಾಟು ಪಾದಯಾತ್ರೆಯಲ್ಲಿ ಟ್ವಿಸ್ಟ್​ ಕೊಟ್ಟ ಡಿ.ಕೆ.ಸುರೇಶ್​