ಹೃದಯಾಘಾತದಿಂದ ಲವ್ಲಿಬಾಯ್ ಟಗರು ಸಾವು: 8 ಲಕ್ಷ ರೂ. ಕೊಡ್ತೀವಿ ಅಂದ್ರೂ ಟಗರನ್ನು ಮಾರಲಿಲ್ಲ…

ಬಾಗಲಕೋಟೆ: ಗೆಲುವಿನ‌ ಸರದಾರ ಲವ್ಲಿಬಾಯ್ ಎಂದೇ ಹೆಸರುವಾಸಿಯಾಗಿದ್ದ ಲವ್ಲಿಬಾಯ್ ಟಗರು ಹೃದಯಾಘಾತದಿಂದ ಮೃತಪಟ್ಟಿದೆ. ಕಾಳಗಕ್ಕೆ ಹೆಸರಾಗಿದ್ದ, ಮುನ್ನೂರಕ್ಕೂ ಹೆಚ್ಚು ಟಗರುಗಳಿಗೆ ಡಿಚ್ಚಿ ಹೊಡೆದು ಸೋಲಿಸಿದ್ದ ಲವ್ಲಿಬಾಯ್ ಟಗರು ಇನ್ನು ನೆನಪು ಮಾತ್ರ. ಬಾಗಲಕೋಟೆ ತಾಲೂಕಿನ ಸೀಗಿಕೇರಿ ಗ್ರಾಮದ ನಾಟಕಕಾರ ಎಚ್​.ಎನ್. ಸೇಬಣ್ಣವರ ಅವರ ಮನೆಯಲ್ಲಿ ಸಾಕಿದ್ದ ಲವ್ಲಿಬಾಯ್ ಟಗರು ಸಾಧನೆ ಅಸಮಾನ್ಯ. 8 ಲಕ್ಷ ರೂಪಾಯಿ ಕೊಡ್ತೀವಿ ಕೊಡಿ ಎಂದ್ರೂ ಈ ಟಗರನ್ನು ಸೇಬಣ್ಣವರ ಅವರು ಮಾರಾಟ ಮಾಡಿರಲಿಲ್ಲ. ಯಾಕಂದ್ರೆ ಈ ಟಗರು ಮೇಲೆ ಅವರಿಗೆ ಅಪಾರ … Continue reading ಹೃದಯಾಘಾತದಿಂದ ಲವ್ಲಿಬಾಯ್ ಟಗರು ಸಾವು: 8 ಲಕ್ಷ ರೂ. ಕೊಡ್ತೀವಿ ಅಂದ್ರೂ ಟಗರನ್ನು ಮಾರಲಿಲ್ಲ…