ಚಿರತೆ ದಾಳಿಗೆ ಬಲಿಯಾಗಿದ್ದ ಕರು ಶವವನ್ನು ಪತ್ತೆಹಚ್ಚಿದ ತಾಯಿಹಸು: ಮಳವಳ್ಳಿಯಲ್ಲಿ ಮನಕಲಕುವ ಘಟನೆ

ಹಲಗೂರು(ಮಂಡ್ಯ): ಚಿರತೆ ದಾಳಿಗೆ ಬಲಿಯಾಗಿದ್ದ ಕರುವನ್ನು ತಾಯಿಹಸು ಪತ್ತೆಹಚ್ಚಿದ್ದು, ಕರುವಿನ ಶವದ ಬಳಿ ತಾಯಿಯ ಮೂಕರೋಧನೆ ನೋಡಿ ಸ್ಥಳೀಯರು ಮಮ್ಮಲಮರಗಿದ್ದಾರೆ. ಇಂತಹ ಮನಕಲಕುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರು ಗ್ರಾಮದಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದೆ. ಕೊನ್ನಾಪುರ ಚಂದ್ರಶೇಖರ್ ಅವರು ಮನೆಯ ಹಿತ್ತಲಿನ ಕೊಟ್ಟಿಗೆಯಲ್ಲಿ ಬುಧವಾರ ರಾತ್ರಿ ಹಸು ಕರು ಕಟ್ಟಿದ್ದರು. ಎಂದಿನಂತೆ ಬೆಳಗ್ಗೆ ಎದ್ದು ಕೊಟ್ಟಿಗೆಗೆ ಹೋದಾಗ ಕರು ಇರಲಿಲ್ಲ. ಮನೆಯ ಸುತ್ತಾಮುತ್ತ ಹುಡುಕಾಡಿದರೂ ಕರು ಪತ್ತೆಯಾಗಲಿಲ್ಲ. ಕೊನೆಗೆ ತಾಯಿಹಸುವಿನ ಹಗ್ಗ ಬಿಚ್ಚಿದ್ದಾರೆ. ಕರುವಿಗಾಗಿ … Continue reading ಚಿರತೆ ದಾಳಿಗೆ ಬಲಿಯಾಗಿದ್ದ ಕರು ಶವವನ್ನು ಪತ್ತೆಹಚ್ಚಿದ ತಾಯಿಹಸು: ಮಳವಳ್ಳಿಯಲ್ಲಿ ಮನಕಲಕುವ ಘಟನೆ