ಕುಣಿಗಲ್​ನಲ್ಲಿ ಅಕ್ರಮವಾಗಿ ಜಲ್ಲಿಕಲ್ಲು ಸಾಗಾಟ: ರಸ್ತೆಬದಿ ನಿಂತು ಹಣ ವಸೂಲಿ ಮಾಡುತ್ತಿದ್ದ ಪೊಲೀಸರಿಗೆ ಆಯ್ತು ತಕ್ಕಶಾಸ್ತಿ

ತುಮಕೂರು: ಅಕ್ರಮವಾಗಿ ಟ್ರ್ಯಾಕ್ಟರ್​ನಲ್ಲಿ ಜಲ್ಲಿಕಲ್ಲು ಸಾಗಾಟ ಮಾಡುತ್ತಿದ್ದವರನ್ನು ಬಂಧಿಸುವ ಬದಲು, ರಸ್ತೆಬದಿ ನಿಂತು ಅವರಿಂದ ಹಣ ವಸೂಲಿ ಮಾಡುತ್ತಿದ್ದ ಆರೋಪದಡಿ ಇಬ್ಬರು ಪೊಲೀಸ್​ ಕಾನ್​ಸ್ಟೇಬಲ್​ಗಳನ್ನು ಕೆಲಸದಿಂದ ಅಮಾನತು ಮಾಡಿ ತುಮಕೂರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಕುಣಿಗಲ್ ಪೊಲೀಸ್ ಠಾಣೆಯ ಹೊಯ್ಸಳ ವಾಹನದ ಚಾಲಕ ಪರಮೇಶ್ವರ್, ಕಾನ್​ಸ್ಟೇಬಲ್​ ಅಶೋಕ್ ಎಂ. ಛಲವಾದ್ ಅಮಾನತುಗೊಂಡವರು. ಕುಣಿಗಲ್ ತಾಲೂಕಿನ ತರೀಕೆರೆ, ಗೌಡನಪಾಳ್ಯ ಸಮೀಪ ಅಕ್ರಮವಾಗಿ ಜಲ್ಲಿಕಲ್ಲು ಸಾಗಾಟ ಮಾಡುತ್ತಿದ್ದ ಟ್ರ್ಯಾಕ್ಟರ್ ಚಾಲಕರಿಂದ ರಸ್ತೆಬದಿ ನಿಂತು ಪೊಲೀಸ್​ … Continue reading ಕುಣಿಗಲ್​ನಲ್ಲಿ ಅಕ್ರಮವಾಗಿ ಜಲ್ಲಿಕಲ್ಲು ಸಾಗಾಟ: ರಸ್ತೆಬದಿ ನಿಂತು ಹಣ ವಸೂಲಿ ಮಾಡುತ್ತಿದ್ದ ಪೊಲೀಸರಿಗೆ ಆಯ್ತು ತಕ್ಕಶಾಸ್ತಿ