ಬೆಳ್ಳಂಬೆಳಗ್ಗೆ ಪೊಲೀಸ್​ ಪೇದೆ ಮಗನ ಭೀಕರ ಕೊಲೆ: ನೂರಾರು ಜನರ ಕಣ್ಣೆದುರೇ ಅಟ್ಟಾಡಿಸಿ ಕೊಂದ ದುಷ್ಕರ್ಮಿಗಳು

ಕಲಬುರಗಿ: ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಇಂದು(ಗುರುವಾರ) ಬೆಳ್ಳಂಬೆಳಗ್ಗೆ ಪೊಲೀಸ್ ಪೇದೆಯೊಬ್ಬರ ಮಗನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ವಿದ್ಯಾನಗರ ಬಡಾವಣೆ ನಿವಾಸಿ, ಪೊಲೀಸ್​ ಪೇದೆ ಚಂದ್ರಕಾಂತ ಎಂಬುವರ ಪುತ್ರ ಅಭಿಷೇಕ ಚಂದ್ರಕಾಂತ (27) ಕೊಲೆಯಾದ ಯುವಕ. ಇಂದು ಬೆಳಗ್ಗೆ ಜಿಮ್​ಗೆ ಹೋಗುವುದಾಗಿ ಹೇಳಿ ಮನೆಯಿಂದ ಬೈಕ್​ ತೆಗೆದುಕೊಂಡು ಅಭಿಷೇಕ ಹೊರ ಬಂದಿದ್ದ. ಅಭಿಷೇಕನನ್ನೇ ದುಷ್ಕರ್ಮಿಗಳ ತಂಡ ಹಿಂಬಾಲಿಸಿದ್ದು, ಇದನ್ನು ಕಂಡ ಅಭಿಷೇಕ ತನ್ನ ಬೈಕ್ ಅನ್ನು ನಗರದ ಕೇಂದ್ರೀಯ ಬಸ್ ನಿಲ್ದಾಣ … Continue reading ಬೆಳ್ಳಂಬೆಳಗ್ಗೆ ಪೊಲೀಸ್​ ಪೇದೆ ಮಗನ ಭೀಕರ ಕೊಲೆ: ನೂರಾರು ಜನರ ಕಣ್ಣೆದುರೇ ಅಟ್ಟಾಡಿಸಿ ಕೊಂದ ದುಷ್ಕರ್ಮಿಗಳು