ಮಕ್ಕಳಿರಬೇಕಿಲ್ಲ ಮನೆತುಂಬ… ಆದರೆ ನಮಗೆಷ್ಟಿರಬೇಕು?

blank

ಮಕ್ಕಳಿರಬೇಕಿಲ್ಲ ಮನೆತುಂಬ... ಆದರೆ ನಮಗೆಷ್ಟಿರಬೇಕು?ನಮಗೆಷ್ಟು ಮಕ್ಕಳಿರಬೇಕು? ಎಂಬುದು ವೈಯಕ್ತಿಕ ವಿಚಾರವಾದರೂ, ಸಾಂಸಾರಿಕವಾಗಿ, ಸಾಮಾಜಿಕವಾಗಿ ಮಾತ್ರವಲ್ಲ ದೇಶದ ಹಿತದೃಷ್ಟಿಯಿಂದಲೂ ಗಮನಿಸಬೇಕಾದ ವಿಷಯ. ಮದುವೆಯಾಗದೇ ಮಕ್ಕಳಾಗುವುದು ಅಕ್ರಮ ಹಾಗೂ ನೀತಿಬಾಹಿರ ಎಂದೆನಿಸಿದರೂ, ಮದುವೆಯಾದ ಮೇಲೆ ಮಕ್ಕಳಾಗುವುದು, ಮತ್ತು ಆಗಬೇಕಾದುದು, ಒಂದು ಸಹಜ ಸ್ವಾಭಾವಿಕ ಅಪೇಕ್ಷಿತ ಪ್ರತಿಕ್ರಿಯೆ. ಇದಕ್ಕೆ ಸಾಂಸಾರಿಕ ಆವಶ್ಯಕತೆಯೂ, ಸಾಮಾಜಿಕ ಅನುಮತಿಯ ಮಾನ್ಯತೆಯೂ ಇರುವುದಲ್ಲದೆ ಧಾರ್ವಿುಕ ಬದ್ಧತೆಯೂ ಇದೆ. ಇದನ್ನೇ ಭಾರತೀಯ ಸಂಸ್ಕೃತಿಯನುಸಾರ ವಿವಾಹದ ವೇಳೆ ಸಪ್ತಪದಿಯನ್ನು ತುಳಿಯುವ 5 ನೇ ಹೆಜ್ಜೆಯಲ್ಲಿ ವಧೂವರರು ಹೇಳಿಕೊಳ್ಳುವ ‘ಪ್ರಜಾಭ್ಯ ಪಂಚಪದೀ ಭವ’ ಎಂಬ ಪ್ರತಿಜ್ಞೆಯಲ್ಲಿ ತಿಳಿಸಲಾಗಿದೆ.

blank

ಅರ್ಥಾತ್, ನಾವಿಬ್ಬರೂ ಒಳ್ಳೆಯ ಮಕ್ಕಳನ್ನು ಪಡೆದು, ಅವರನ್ನು ಸಾಕಿ, ಸಲಹಿ, ಬೆಳೆಸಿ, ಕಲಿಸಿ, ಸತ್ಪ್ರಜೆಗಳನ್ನಾಗಿ ಮಾಡಿ ದೇಶಕ್ಕೆ ಸಮರ್ಪಿಸೋಣ. ಈ ಹಿನ್ನೆಲೆಯಲ್ಲಿ ಮಕ್ಕಳಿಂದ ನಮ್ಮ ಶಾಂತಿ, ನೆಮ್ಮದಿಗೆ ತೊಂದರೆ, ಆದುದರಿಂದ ಮಕ್ಕಳೇ ಬೇಡವೆನ್ನುವ ದಂಪತಿಗಳ ಯೋಚನೆ ತರವಲ್ಲ. ನಮ್ಮ ಹೆತ್ತವರೂ ಹೀಗೆಯೇ ಯೋಚಿಸುತ್ತಿದ್ದರೆ, ನಾವ್ಯಾರೂ ಈ ಜಗತ್ತಿಗೆ ಬರುತ್ತಿರಲಿಲ್ಲ. ವೈದ್ಯಕೀಯ ಕಾರಣಗಳಿಂದ ಹೊರತಾಗಿ ಮಕ್ಕಳನ್ನು ಹಡೆಯದ ಜೀವನ ಅಪೂರ್ಣ; ಅಂತಹ ಮನೆ ಖಾಲಿ ಖಾಲಿ. ಮನೆಯೊಳಗೆ ಮಕ್ಕಳು ಗದ್ದಲವನ್ನೇ ಮಾಡಲಿ, ಗೋಡೆ ತುಂಬಾ ಅದರ ಅಂದವನ್ನೇ ಕೆಡಿಸಲಿ, ನಮ್ಮ ಬಟ್ಟೆಯ ಮೇಲೆ ಉಚ್ಚೆಯನ್ನೇ ಹೊಯ್ಯಲಿ. ಆದರೆ ಮನೆಯೊಳಗೆ ಮಕ್ಕಳಿರಲಿ! ಹಾಗಂತ ಕೆಲವು ಧರ್ವಿುಯರ ಅನುಸರಣೆಯಂತೆ ಮನೆ ತುಂಬಾ ಮಕ್ಕಳಿರಲಿ ಎಂಬುದು ಹಿಂದಿನ ಕಾಲದ ಹಿರಿಯರ ಆಶಯ-ಆಶೀರ್ವಾದ ಆಗಿದ್ದರೂ, ತಾಯಿಯ ಆರೋಗ್ಯದ ದೃಷ್ಟಿಯಲ್ಲಿ ಹಾಗೂ ಹೊರೆಭಾರವಾಗುವ ಆರ್ಥಿಕ ಹಾಗೂ ದೇಶದ ಹಿತದೃಷ್ಟಿಯಿಂದ ಸಾಧುವಲ್ಲ! ನಮಗೆಲ್ಲರಿಗೂ ದೇಶ ಮೊದಲು-ಆಮೇಲೆ ನಮ್ಮ ಆಶಯ, ಜಾತಿ ಧರ್ಮ.

ಒಂದು ಕೋಮಿನವರ ಸಂಖ್ಯೆ ಬೆಳೆದು ಇತರ ಕೋಮಿನವರ ಸಂಖ್ಯೆ ಇಳಿಮುಖವಾದರೆ, ಅಸಮ ತೋಲನವುಂಟಾಗಿ, ಸಮಸ್ಯೆಯನ್ನು ತಂದೊಡ್ಡದೇ? ಆದುದರಿಂದ ಮಕ್ಕಳಿರಬೇಕು; ಆದರೆ ಇತಿಮಿತಿಯೊಳಗಿರಬೇಕು. ಗಂಡಾಗಲಿ, ಹೆಣ್ಣಾಗಲಿ ಒಂದೇ ಮಗು ಸಾಕು ಎನ್ನುವುದು ಕೂಡಾ ಒಳ್ಳೆಯ ನಿರ್ಧಾರವಲ್ಲ. ಒಂದೇ ಮಗು ಮಾಡಿಕೊಳ್ಳುವುದರಿಂದ ಆಗುವ ತೊಂದರೆಗಳೆಂದರೆ ಜೊತೆಜೊತೆಯಲಿ ಆಟವಾಡಲು, ಪಾಠಕಲಿಯಲು, ಬೆಳೆಯಲು ಸಂಗಾತಿಯಿಲ್ಲದೆ ಮಗು ಏಕಾಂಗಿತನವನ್ನು ಅನುಭವಿಸು ತ್ತದೆ. ಹೆತ್ತವರಲ್ಲಿ ಒಂದೇ ಮಗು ಎಂಬ ಮನೋಸ್ಥಿತಿ ಸೃಷ್ಟಿಯಾಗಿ, ಮಗುವಿನ ಮೇಲೆ ಅತಿಯಾದ ವ್ಯಾಮೋಹದಿಂದ ಮಗು ಹೇಳಿದಂತೆ ಕುಣಿಯುತ್ತಾರೆ; ಮಗುವಿನ ರಕ್ಷಣೆಯ ಕುರಿತಾದ ಭಯದಿಂದ ಬದುಕುತ್ತಾರೆ.

ಅಕಸ್ಮಾತ್ತಾಗಿ, ಇದ್ದ ಒಂದೇ ಒಂದು ಮಗು, ಯಾವುದಾದರೂ ಕಾರಣದಿಂದ ಅಕಾಲ ಮೃತ್ಯುವಿಗೆ ಒಳಗಾದರೆ, ಇಲ್ಲವೇ ಹೆತ್ತವರನ್ನೇ ತ್ಯಜಿಸಿ ಹೋದರೆ, ಹೆತ್ತವರು ಜೀವನ ಪರ್ಯಂತ ಮಕ್ಕಳಿಲ್ಲದ ಕೊರಗಿನಲ್ಲಿ ಬಾಳಬೇಕಾಗುತ್ತದೆ. ಅಂತೆಯೇ ಹೆತ್ತವರ ಕಾಲಾನಂತರ, ಮಗು ಒಡಹುಟ್ಟಿದ ಯಾವುದೇ ರಕ್ತಸಂಬಂಧಗಳಿಲ್ಲದೆ ಒಂಟಿ ಜೀವವಾಗುತ್ತದೆ. ಈ ಹಿನೆ್ನಲೆಯಲ್ಲಿ, ದಂಪತಿಗಳಿಗೆ ಮುಖ್ಯವಾಗಿ ಮಹಿಳೆಗೆ ಮಕ್ಕಳಾಗದಂತಹ ಆರೋಗ್ಯ ಸಮಸ್ಯೆ ಇಲ್ಲದಿದ್ದಲ್ಲಿ ಹಾಗೂ ಮಕ್ಕಳನ್ನು ಸಾಕಿ ಸಲಹಲು ಬೇಕಾದ ಆರ್ಥಿಕ ಸ್ಥಿತಿಗತಿ ಇದ್ದಲ್ಲಿ ಎರಡನೆಯ ಮಗುವನ್ನು ಮಾಡಿಕೊಳ್ಳುವುದು ಎಲ್ಲಾ ದೃಷ್ಟಿಯಿಂದಲೂ ಕ್ಷೇಮ. ಈ ಸತ್ವವನ್ನಾಧರಿಸಿಯೇ, 1960ರಲ್ಲಿ ಆರಂಭವಾದ ಕುಟುಂಬಯೋಜನೆಯಡಿ ‘ನಾವಿಬ್ಬರು ನಮಗಿಬ್ಬರು’ ಎಂಬ ಸೂತ್ರ ಜಾರಿಗೆ ಬಂತು.

ಇನ್ನೂ ಈ ಎರಡು ಮಕ್ಕಳ ಪೈಕಿ, ಒಂದು ಗಂಡು ಒಂದು ಹೆಣ್ಣಾದರೆ ಚೆನ್ನ, ಒಂದು ವೇಳೆ ಆಗದಿದ್ದರೂ ಪರವಾಗಿಲ್ಲ. ಆರತಿಗೊಬ್ಬಳು ಮಗಳು, ಕೀರುತಿಗೊಬ್ಬ ಮಗನಿರಬೇಕೆಂಬುದು ಬರಿಯ ಆಶಯ. ಅದು ಹಾಗೆಯೇ ಆಗಬೇಕೆಂದೇನೂ ಇಲ್ಲ. ಮಗಳೇ ಮನೆಗೆ ಕೀರ್ತಿ ತರಬಹುದು, ಮಗ ಮನೆಹಾಳನಾಗಬಹುದು. ಆದುದರಿಂದ ಗಂಡಾಗಲೀ ಹೆಣ್ಣಾಗಲೀ, ಇಬ್ಬರಿಗೂ ಸರಿಸಮಾನವಾದ ಪ್ರೀತಿ, ವಿಶ್ವಾಸ, ನೀಡಬೇಕಾದುದು ನ್ಯಾಯಸಮ್ಮತ ಹಾಗೂ ಕಾನೂನು ಬದ್ಧ. ಇನ್ನು ಸತ್ತ ಮೇಲೆ ನಮಗೆ ಸದ್ಗತಿ ಕೊಡಿಸಲು ಒಬ್ಬ ಗಂಡು ಮಗನಿರಲೇ ಬೇಕು ಎಂಬುದು ಒಂದು ಮೂಢನಂಬಿಕೆ. ಇದು ನಿಜವಾಗಿದ್ದಲ್ಲಿ ಮಕ್ಕಳೇ ಇಲ್ಲದ ಯತಿಗಳ ಗತಿ ಏನು? ಕಾರಣ, ಸತ್ತ ಮೇಲೆ ಸ್ವರ್ಗವೆಂಬುದಿದ್ದರೆ, ಅದು ಪ್ರಾಪ್ತಿಯಾಗುವುದು, ನಾವು ಗೈದ ಸತ್ಕಾರ್ಯ, ಸತ್ವಗುಣಗಳಿಂದಲೇ ಹೊರತು ಮಗ ಹಾಕಿದ ಪಿಂಡದಿಂದಲ್ಲ!

ಹಿಂದಿನ ಕಾಲದಲ್ಲಿ ನಾವಿಬ್ಬರು, ನಮಗೆ ಬರೇ ಮಕ್ಕಳು; ಬರಬರುತ್ತಾ ನಾವಿಬ್ಬರು ನಮಗಿಬ್ಬರು. ಈಗಂತೂ ನಾವಿಬ್ಬರು ನಮಗೊಬ್ಬರೇ. ಇನ್ನು ಮುಂದೆ ಮನೆಗೊಂದು ಮಗು ಬದಲು ಬೀದಿಗೊಂದು ಮಗು ಎಂಬ ಕಾಲ ಬರಬಹುದೇನೋ. ಹಾಗಾಗದಿರಲಿ! ಎಲ್ಲರಿಗೂ ಅವರದೇ ಆದ ಇಬ್ಬರು ಮಕ್ಕಳಿರಲಿ.

1 ಕೆಜಿ ಅಕ್ಕಿ 339, ಮೊಟ್ಟೆ 332 ರೂ.! ಭಾರತಕ್ಕೆ ಯುದ್ಧ ಸವಾಲು ಹಾಕುವ ಪಾಕಿಸ್ತಾನಕ್ಕಿಲ್ಲ ನೆಮ್ಮದಿಯ ಬದುಕು | Pakistan Inflation

Share This Article

ವಾರದ ಯಾವ ದಿನ ಯಾವ ದೇವರನ್ನು ಪೂಜಿಸಬೇಕೆಂದು ನಿಮಗೆ ತಿಳಿದಿದೆಯೇ? Weekly Worship Guide

Weekly Worship Guide : ದೇವರ ಆರಾಧನೆಯು ಜೀವನದಲ್ಲಿ ವಿಶೇಷವಾಗಿ ಪ್ರಮುಖ ಸ್ಥಾನವನ್ನು ಹೊಂದಿದೆ. ಪ್ರತಿದಿನ…

ದೇಹದ ತೂಕ ಕಡಿಮೆ ಮಾಡಲು ಮಾವಿನ ಎಲೆ ಕಷಾಯ! Mango Leaves ಬಳಸುವುದು ಹೇಗೆ?

Mango Leaves :  ಇತ್ತೀಚಿನ ದಿನಗಳಲ್ಲಿ, ಅಧಿಕ ತೂಕವು ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಅಧಿಕ…

ಬೀದಿ ಬದಿ ಅಂಗಡಿಗಳಲ್ಲಿ ಹಣ್ಣಿನ ಜ್ಯೂಸ್​ ಕುಡಿಯುವಾಗ ಐಸ್​ ಸೇರಿಸುವುದನ್ನು ತಪ್ಪಿಸಿ… ಆಘಾತಕಾರಿ ವಿಡಿಯೋ ವೈರಲ್​! Street Juices

Street Juices : ಅನೇಕ ಮಂದಿ ವಿವಿಧ ರೀತಿಯ ಹಣ್ಣಿನ ಜ್ಯೂಸ್‌ಗಳನ್ನು ಇಷ್ಟಪಡುತ್ತಾರೆ. ಅದರಲ್ಲೂ ಬೇಸಿಗೆಯಲ್ಲಿ…