ಹನಿಟ್ರ್ಯಾಪ್​ ಕೇಸಲ್ಲಿ ಕಾಂಗ್ರೆಸ್​ ಯುವ ನಾಯಕಿ ನವ್ಯಶ್ರೀ: ವಿಧಾನಸಭೆ ಚುನಾವಣೆಗೂ ಸ್ಪರ್ಧಿಸಿದ್ದ ಈಕೆ ಹಿನ್ನೆಲೆ ಇಲ್ಲಿದೆ

ಬೆಂಗಳೂರು: ಚನ್ನಪಟ್ಟಣ ತಾಲೂಕಿನ ಕಾಂಗ್ರೆಸ್​ನ ಯುವ ನಾಯಕಿಯಾಗಿ ಗುರಿತಿಸಿಕೊಂಡಿದ್ದ ನವ್ಯಶ್ರೀ ರಾಮಚಂದ್ರರಾವ್​ ಮತ್ತು ಈಕೆಯ ಪ್ರಿಯಕರ ಚನ್ನಪಟ್ಟಣದ ತಿಲಕ್​ ರಾಜ್​ ಹನಿಟ್ರ್ಯಾಪ್ ಪ್ರಕರಣ ದಾಖಲಾಗುತ್ತಿದ್ದಂತೆ, ರಾಜ್ಯ-ರಾಷ್ಟ್ರ ಮಟ್ಟದ ಕಾಂಗ್ರೆಸ್​ ನಾಯಕರೊಂದಿಗೆ ಈಕೆ ತೆಗೆಸಿಕೊಂಡಿದ್ದ ಫೋಟೋಗಳು ವೈರಲ್​ ಆಗಿವೆ. ಇತೆಗೆ ಯಾರೀ ನವ್ಯಶ್ರೀ? ಈಕೆಯ ಹಿನ್ನೆಲೆ ಏನು? ಎಂಬ ಪ್ರಶ್ನೆಯೂ ಮೂಡಿದೆ. ಚನ್ನಪಟ್ಟಣದ ಮೂಲದ ನವ್ಯಶ್ರೀ ರಾಮಚಂದ್ರರಾವ್, 7 ವರ್ಷಗಳ ಹಿಂದೆ ನವ್ಯಶ್ರೀ ಫೌಂಡೇಷನ್ ಎಂಬ ಹೆಸರಿನಲ್ಲಿ ಸಮಾಜ ಸೇವೆ ಮಾಡುವುದಾಗಿ ಗುರುತಿಸಿಕೊಂಡಿದ್ದಳು. ನವ್ಯಶ್ರೀ ಫೌಂಡೇಷನ್​ಗೆ ಈಕೆಯೇ ಸಂಸ್ಥಾಪಕಿ. … Continue reading ಹನಿಟ್ರ್ಯಾಪ್​ ಕೇಸಲ್ಲಿ ಕಾಂಗ್ರೆಸ್​ ಯುವ ನಾಯಕಿ ನವ್ಯಶ್ರೀ: ವಿಧಾನಸಭೆ ಚುನಾವಣೆಗೂ ಸ್ಪರ್ಧಿಸಿದ್ದ ಈಕೆ ಹಿನ್ನೆಲೆ ಇಲ್ಲಿದೆ