ಸುಶಾಂತ್ ಕೇಸ್ ತನಿಖೆಗೆ ನೇಮಕಗೊಂಡ ಕವಿ!

ಪಟನಾ: ನಟ ಸುಶಾಂತ್‌ಸಿಂಗ್ ರಜಪೂತ್ ಸಾವಿನ ಪ್ರಕರಣ ತನಿಖೆಗೆ ನಿಯುಕ್ತಿಗೊಂಡಿರುವ ಬಿಹಾರದ ಪೊಲೀಸ್ ಅಧಿಕಾರಿ ವಿನಯ್ ತಿವಾರಿ ಕವಿಯೂ ಹೌದು. ಅವರು ರಚಿಸಿ, ತನ್ಮಯತೆಯಿಂದ ವಾಚಿಸಿರುವ/ಹಾಡಿರುವ ಕವನವನ್ನು ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಮೂಲತಃ ಉತ್ತರಪ್ರದೇಶದ ಲಲಿತ್‌ಪುರದವರಾದ ವಿನಯ್ ತಿವಾರಿ, 2015ರ ಬ್ಯಾಚ್‌ನ ಐಪಿಎಸ್ ಅಧಿಕಾರಿ. ಅವರ ತಂದೆ ಕೃಷಿಕ. ಬಡತನದಲ್ಲೇ ಮಗನನ್ನು ಓದಿಸಿದರು. ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಆಸಕ್ತಿ ಹೊಂದಿದ್ದ ವಿನಯ್, ಓದು ಮುಂದುವರಿಸಲು ರಾಜಸ್ಥಾನದ ಕೋಟಾಕ್ಕೆ ಹೋದರು. ನಂತರ ಐಐಟಿ- ಭುವನೇಶ್ವರದಲ್ಲಿ ಪ್ರವೇಶ ಪಡೆಯುವಲ್ಲಿಯೂ ಯಶಸ್ವಿಯಾದರು. … Continue reading ಸುಶಾಂತ್ ಕೇಸ್ ತನಿಖೆಗೆ ನೇಮಕಗೊಂಡ ಕವಿ!