ಯುಗಾದಿ ಹಬ್ಬಕ್ಕೆ ತವರು ಮನೆಗೆ ಬಂದ ಮಗಳು-ಅಳಿಯನ ಬದುಕಲ್ಲಿ ದುರಂತ! ಗರ್ಭಿಣಿ ಮಗಳನ್ನೇ ಗುಂಡಿಕ್ಕಿ ಕೊಂದ ತಂದೆ

ಕೃಷ್ಣಗಿರಿ: ಗರ್ಭಿಣಿ ಮಗಳನ್ನೇ ಗುಂಡಿಕ್ಕಿ ಪಾಪಿ ತಂದೆ ಕೊಂದಿದ್ದಾನೆ. ಯುಗಾದಿ ಹಬ್ಬಕ್ಕೆಂದು ಗಂಡನ ಮನೆಯಿಂದ ತವರು ಮನೆಗೆ ಗಂಡನ ಜತೆ ಬಂದಿದ್ದ ಮಗಳು ಅಪ್ಪನ ಕೈಯಿಂದಲೇ ಕೊಲೆಯಾದ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಅಂಚೆಟ್ಟಿ ತಾಲೂಕಿನ ಮದಯ್ಯದೊಡ್ಡಿ ಗ್ರಾಮದಲ್ಲಿ ಸಂಭವಿಸಿದೆ. ವೆಂಕಟಲಕ್ಷ್ಮೀ(21) ಮೃತ ದುರ್ದೈವಿ. ಮಗಳನ್ನೇ ಕೊಲೆ ಮಾಡಿದವ ಅರುಣಾಚಲಂ(50). ನಾಲ್ಕು ತಿಂಗಳ ಹಿಂದಷ್ಟೆ ಮಾಲೂರಿನ ಶ್ರೀನಿವಾಸನ್ ಎಂಬಾತನ ಜತೆ ವೆಂಕಟಲಕ್ಷ್ಮೀಯನ್ನು ಮದುವೆ ಮಾಡಲಾಗಿತ್ತು. ಮೂರು ತಿಂಗಳ ಗರ್ಭಿಣಿ ಆಗಿದ್ದಳು. ಯುಗಾದಿ ಹಬ್ಬಕ್ಕೆಂದು ತವರು ಮನೆಗೆ ಮಗಳು … Continue reading ಯುಗಾದಿ ಹಬ್ಬಕ್ಕೆ ತವರು ಮನೆಗೆ ಬಂದ ಮಗಳು-ಅಳಿಯನ ಬದುಕಲ್ಲಿ ದುರಂತ! ಗರ್ಭಿಣಿ ಮಗಳನ್ನೇ ಗುಂಡಿಕ್ಕಿ ಕೊಂದ ತಂದೆ