ಕುಣಿಗಲ್​ ತಾಲೂಕಿನಲ್ಲಿ ಸರ್ಕಾರಿ ಶಾಲೆಯ ಮೂವರು ಶಿಕ್ಷಕರು ಕರೊನಾಗೆ ಬಲಿ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡ ತುಮಕೂರು ಜಿಲ್ಲೆಯಲ್ಲಿ ಮಾಹಾಮಾರಿ ಕರೊನಾ ಸ್ಫೋಟಗೊಂಡಿದೆ. ಯುವಕ-ಯುವತಿಯರು-ಮಧ್ಯವಯಸ್ಕರೇ ಹೆಚ್ಚಿನ ಸಂಖ್ಯೆಯಲ್ಲಿ ಕರೊನಾಗೆ ಬಲಿಯಾಗುತ್ತಿದ್ದು, ಈ ಸಾವಿನ ಸರಣಿಗೆ ಸರ್ಕಾರಿ ಶಾಲೆ ಶಿಕ್ಷಕರೂ ಸೇರುತ್ತಿರುವುದು ದುರಂತ. ತುಮಕೂರು ಜಿಲ್ಲೆ ಕುಣಿಗಲ್​ ತಾಲೂಕಿನಲ್ಲಿ ಸರ್ಕಾರಿ ಶಾಲೆಗಳ ಮೂವರು ಶಿಕ್ಷಕರು ಕರೊನಾದಿಂದ ಮೃತಪಟ್ಟಿದ್ದಾರೆ. ಒಂದೇ ದಿನ ಮೂವರು ಶಿಕ್ಷಕರು ಕೋವಿಡ್​ಗೆ ಬಲಿಯಾಗಿದ್ದಾರೆ. ಉಜ್ಜನಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಶಿವರಾಮೇಗೌಡ, ಮಲ್ಲಿಪಾಳ್ಯದ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಪರಮೇಶ್ವರ ಆಚಾರ್ ಮತ್ತು ತುರುಗುನೂರು ಗ್ರಾಮದ ಸರ್ಕಾರಿ … Continue reading ಕುಣಿಗಲ್​ ತಾಲೂಕಿನಲ್ಲಿ ಸರ್ಕಾರಿ ಶಾಲೆಯ ಮೂವರು ಶಿಕ್ಷಕರು ಕರೊನಾಗೆ ಬಲಿ