ಕೆರೂರಲ್ಲಿ ಸಂಭ್ರಮದ ಕಲಶದ ಮೆರವಣಿಗೆ

kerur 17-1

ಕೆರೂರ: ಪಟ್ಟಣದ ಶಕ್ತಿದೇವತೆ ಆರಾಧ್ಯದೈವ ಬನಶಂಕರಿ ದೇವಿಯ 87ನೇ ಜಾತ್ರಾ ಮಹೋತ್ಸವದ ಪ್ರಯುಕ್ತ ಶುಕ್ರವಾರ ಕಲಶದ ಮೆರವಣಿಗೆ ಸಂಭ್ರಮದಿಂದ ನಡೆಯಿತು.

ಬೆಳಗ್ಗೆ ಗೌಡರ ಮನೆತನಕ್ಕೆ ಸೇರಿದ ಗೋಪಾಲ ಶೇ. ಗೌಡರ ಮನೆಯಲ್ಲಿನ ಕಲಶವನ್ನು ಅವರ ಪರಿವಾರದವರು ಪೂಜೆ ಸಲ್ಲಿಸಿದ ಬಳಿಕ ಮಹಿಳೆಯರ ಕಲಶದಾರತಿ ಸಮೇತ ಸಕಲವಾದ್ಯಮೇಳಗಳೊಂದಿಗೆ ಕಲಶದ ಮೆರವಣಿಗೆ ನಡೆಯಿತು. ಪಾದಗಟ್ಟಿ, ಬಸರಿಗಿಡದ ಪೇಟೆ, ರಾಷ್ಟ್ರೀಯ ಹೆದ್ದಾರಿ ಮೂಲಕ ಹಾಯ್ದು ನೆಹರು ನಗರ, ಕಂಠಿಯವರ ಓಣಿ, ಭಾವಿಕಟ್ಟಿಯವರ ಓಣಿ ಸೇರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಮಾರ್ಗದುದ್ದಕ್ಕೊ ಮಹಿಳೆಯರು ಬಣ್ಣಬಣ್ಣದ ರಂಗೋಲಿ ಬಿಡಿಸಿ ಮೆರವಣಿಗೆಗೆ ಮೆರಗು ತಂದರು. ಯುವಕರು ಸೇರಿ ಹಿರಿಯರು ‘ತಾಯಿ ಬನಶಂಕರಿ ದೇವಿ ನಿನ್ನ ಪಾದಕ ಶಂಭೂಕೋ’ ಎಂದು ಪರಾಕು ಹಾಕುತ್ತಾ ಭಕ್ತಿ ಮೆರೆದರು.

ಮುದ್ದುಸಂಗಸ್ವಾಮಿ ದೇವಾಂಗಮಠ, ಯಂಕಣ್ಣ ಗುಡಿಸಾಗರ, ಸಂಕಣ್ಣ ಹೊಸಮನಿ, ಪಾಂಡಪ್ಪ ಅಂಕದ, ರಾಚೋಟೇಶ್ವರ ಕುದರಿ, ವಿಠ್ಠಲಗೌಡ ಗೌಡರ, ಶ್ರೀನಿವಾಸ ಹೆಬ್ಭಳ್ಳಿ, ಮಂಜುನಾಥ ಪತ್ತಾರ, ಎಲ್. ಎಚ್. ಕ್ವಾನ್ನೂರ, ನವೀನ ಕ್ವಾನ್ನೂರ, ಆನಂದ ಸೊಳಿಕೇರಿ, ಮಾರುತಿ ಪರದೇಶಿ ಇತರರಿದ್ದರು.

Share This Article

ರುಚಿಕರ ಟೊಮೆಟೊ ಹಪ್ಪಳ ಮಾಡುವುದೇಗೆ?; ಇಲ್ಲಿದೆ ಸಿಂಪಲ್​ ವಿಧಾನ | Recipe

ಭರ್ಜರಿ ಭೋಜನ ಹಪ್ಪಳ ಇಲ್ಲದಿದ್ದರೆ ಸಂಪೂರ್ಣ ಎಂದು ಎನ್ನಿಸುವುದಿಲ್ಲ. ಊಟದ ಎಲೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಈಗ…

ಸಿಹಿ ಮೊಸರು ಅಥವಾ ಉಪ್ಪುಸಹಿತ ಮೊಸರು; ಯಾವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ | Health Tips

ಭಾರತದ ಪ್ರತಿಯೊಂದು ಮನೆಯಲ್ಲೂ ಮೊಸರನ್ನು ಸೇವಿಸಲಾಗುತ್ತದೆ. ಅದರ ಜೀರ್ಣಕಾರಿ ಪ್ರಯೋಜನಗಳು, ಆರೋಗ್ಯ ವರ್ಧಕ ಗುಣಗಳು ಮತ್ತು…

ಪಿರಿಯಡ್ಸ್​ನಲ್ಲಿ ಮಹಿಳೆಯರು ಈ 3 ಆಹಾರವನ್ನು ತಪ್ಪದೆ ಸೇವಿಸಿ; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಆಹಾರ ಪದ್ಧತಿಗೆ ಸಂಬಂಧಿಸಿದ ತಪ್ಪು ಕಲ್ಪನೆಗಳನ್ನು ನಿವಾರಿಸುವಲ್ಲಿ ಮತ್ತು ಜನರಿಗೆ ಸರಿಯಾದ ಮಾಹಿತಿಯನ್ನು ನೀಡುವುದರಲ್ಲಿ ಅವರು…