ಸಕಲೇಶಪುರದಲ್ಲಿ ಪೈಪ್​ಲೈನ್​ ಕೊರೆದು ಪೆಟ್ರೋಲ್​ ಕದಿಯಲು ಯತ್ನ: ಪೊಲೀಸರು ಬರುತ್ತಿದ್ದಂತೆ ಖದೀಮರು ಪರಾರಿ

ಸಕಲೇಶಪುರ: ತಾಲೂಕಿನ ಹುರುಡಿ ಗ್ರಾಮ ಹೊರವಲಯದಲ್ಲಿ ಪೈಪ್​ಲೈನ್​ಗೆ ಕನ್ನ ಹಾಕಿ ಪೆಟ್ರೋಲ್​ ಕದಿಯಲು ಯತ್ನಿಸಿದ ಘಟನೆ ಸಂಭವಿಸಿದೆ. ಪೊಲೀಸರೊಂದಿಗೆ ಎಂಎಚ್​ಬಿ ಕಂಪನಿ ಅಧಿಕಾರಿಗಳು ಚುರುಕಿನ ಕಾರ್ಯಾಚರಣೆ ನಡೆಸಿದ್ದರಿಂದ ಖದೀಮರ ಸಂಚು ವಿಫಲವಾಗಿದೆ. ಎಂಎಚ್​ಬಿ ಕಂಪನಿ ಮಂಗಳೂರಿನಿಂದ ಬೆಂಗಳೂರಿಗೆ ಪೈಪ್​ಲೈನ್​ ಮೂಲಕ ಪೆಟ್ರೋಲ್​ ಸಾಗಿಸುತ್ತಿದೆ. ಎರಡು ದಿನಗಳ ಹಿಂದೆ ಕಳ್ಳರು ಗ್ರಾಮ ಹೊರವಲಯದಲ್ಲಿ ಜೆಸಿಬಿ ಮೂಲಕ ಪೈಪ್​ಲೈನ್​ ಮೇಲಿನ ಮಣ್ಣನ್ನು ತೆರವುಗೊಳಿಸಿ, ಪೈಪ್​ಗೆ ವಾಲ್ವ್​ ಫಿಟ್​ ಮಾಡಿ, ಪೈಪ್​ ಅಳವಡಿಸಿ ಅದಕ್ಕೆ ರಂದ್ರ ಕೊರೆಯುತ್ತಿದ್ದರು. ಈ ವೇಳೆ ದಕ್ಷಿಣ … Continue reading ಸಕಲೇಶಪುರದಲ್ಲಿ ಪೈಪ್​ಲೈನ್​ ಕೊರೆದು ಪೆಟ್ರೋಲ್​ ಕದಿಯಲು ಯತ್ನ: ಪೊಲೀಸರು ಬರುತ್ತಿದ್ದಂತೆ ಖದೀಮರು ಪರಾರಿ