ಯುವ ನಟನ ಬರ್ಬರ ಹತ್ಯೆ: ಕೆಲ ತಿಂಗಳ ಹಿಂದೆಯೇ ಪತ್ನಿ ಸಾವು, ಪುಟ್ಟ ಕಂದನೀಗ ತಬ್ಬಲಿ… ಮನಕಲಕುತ್ತೆ ಈ ಸ್ಟೋರಿ

ಬೆಂಗಳೂರು: ಚಿತ್ರರಂಗದಲ್ಲಿ ಹೆಸರು ಮಾಡಬೇಕೆಂದು ಕನಸು ಕಂಡಿದ್ದ ಮಂಡ್ಯ ಮೂಲದ ಯುವನಟ ಸತೀಶ್​ ವಜ್ರ ಅವರನ್ನು ಶುಕ್ರವಾರ ರಾತ್ರಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಯುವತಿಯೊಬ್ಬಳನ್ನು ಪ್ರೀತಿಸಿ ಮದ್ವೆ ಆಗಿದ್ದ ಸತೀಶ್​ಗೆ ಒಂದು ಮಗು ಕೂಡ ಇದೆ. ಆದರೆ, ಕೆಲ ತಿಂಗಳ ಹಿಂದೆ ಪತ್ನಿ ಮೃತಪಟ್ಟಿದ್ದರು. ಇದೀಗ ಸತೀಶ್​ರನ್ನು ಯಾರೋ ದುಷ್ಕರ್ಮಿಗಳು ಕೊಲೆ ಮಾಡಿದ್ದು, ಅಪ್ಪ-ಅಮ್ಮನನ್ನು ಕಳೆದುಕೊಂಡ ಪುಟ್ಟ ಕಂದ ತಬ್ಬಲಿಯಾಗಿದೆ. ಪಾಂಡವಪುರ ತಾಲೂಕಿನ ಹಳೇಬೀಡು ಮೂಲದ ಸತೀಶ್, ಮೂರು ವರ್ಷಗಳಿಂದ ಆರ್.ಆರ್.ನಗರದ ಮನೆಯಲ್ಲಿ ಬಾಡಿಗೆಗೆ ವಾಸವಿದ್ದರು. ಪತ್ನಿ … Continue reading ಯುವ ನಟನ ಬರ್ಬರ ಹತ್ಯೆ: ಕೆಲ ತಿಂಗಳ ಹಿಂದೆಯೇ ಪತ್ನಿ ಸಾವು, ಪುಟ್ಟ ಕಂದನೀಗ ತಬ್ಬಲಿ… ಮನಕಲಕುತ್ತೆ ಈ ಸ್ಟೋರಿ