6,6,6,6,6,6,6,6: ಕ್ರಿಕೆಟ್​ ಇತಿಹಾಸದಲ್ಲೇ ಇದೇ ಮೊದಲು! ಸಿಕ್ಸರ್​ ಸುರಿಮಳೆಗೆ ನಿಬ್ಬೆರಗಾದ ಕ್ರೀಡಾಜಗತ್ತು | 8 Sixes Off 8 Balls

8 Sixes Off 8 Balls

8 Sixes Off 8 Balls : ವಿಶ್ವ ಕ್ರಿಕೆಟ್​ನಲ್ಲಿ ಹಲವು ದಾಖಲೆಗಳು ದಾಖಲಾಗುತ್ತಲೇ ಇರುತ್ತವೆ. ಟಿ20 ಮತ್ತು ಟಿ10 ಸ್ವರೂಪ ಬಂದ ಮೇಲಂತೂ ದಾಖಲೆಗಳ ಸುರಿಮಳೆಯಾಗುತ್ತಿವೆ. ಟೀಮ್​ ಇಂಡಿಯಾ ಮಾಜಿ ಆಟಗಾರ ಯುವರಾಜ್​ ಸಿಂಗ್​ ಒಂದೇ ಓವರ್​ನಲ್ಲಿ 6 ಸಿಕ್ಸರ್​ ಬಾರಿಸಿದ್ದನ್ನು ನೀವು ನೋಡಿರಬಹುದು. ಆದರೆ, ಈ ದಾಖಲೆ ಅದನ್ನೂ ಮೀರಿಸಿದೆ.

ಹೌದು, ಇತ್ತೀಚೆಗೆ ಬ್ಯಾಟ್ಸ್‌ಮನ್ ಒಬ್ಬ 8 ಎಸೆತಗಳಲ್ಲಿ ಸತತ 8 ಸಿಕ್ಸರ್ ಬಾರಿಸುವ ಮೂಲಕ ವಿಶ್ವಕ್ರಿಕೆಟ್​ ಅನ್ನು ನಿಬ್ಬೆರಗಾಗಿಸಿದ್ದಾರೆ. ಸ್ಪೇನ್​ನಲ್ಲಿ ನಡೆದ ಟಿ10 ಟೂರ್ನಿಯಲ್ಲಿ ಈ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕ್ರೀಡಾಭಿಮಾನಿಗಳು ಹುಬ್ಬೇರಿಸಿದ್ದಾರೆ.

ಯುನೈಟೆಡ್ ಸಿಸಿ ಗಿರೋನಾ ಮತ್ತು ಪಾಕ್ ಬಾರ್ಸಿಲೋನಾ ನಡುವಿನ ಪಂದ್ಯ ಸ್ಪೇನ್​ನ ಮಾಂಟ್ಜುಕ್ ಒಲಿಂಪಿಕ್ ಕ್ರೀಡಾಂಗಣದಲ್ಲಿ ನಿನ್ನೆ (ನ.20) ನಡೆಯಿತು. ಈ ಪಂದ್ಯದಲ್ಲಿ ಬಾರ್ಸಿಲೋನಾದ ಬ್ಯಾಟ್ಸ್​ಮನ್​ ಅಲಿ ಹಸನ್ ಎಂಟು ಎಸೆತಗಳಲ್ಲಿ ಎಂಟು ಸಿಕ್ಸರ್ ಬಾರಿಸುವ ಮೂಲಕ ಕ್ರಿಕೆಟ್ ಜಗತ್ತನ್ನು ಅಚ್ಚರಿಗೊಳಿಸಿದರು.

ಇದನ್ನೂ ಓದಿ: ಈ ಬ್ಯಾಟ್ಸ್​ಮನ್​ಗೆ 25 ರಿಂದ 28 ಕೋಟಿ ರೂ. ಗ್ಯಾರಂಟಿ! ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಭವಿಷ್ಯ | IPL 2025

ಮೊದಲು ಬ್ಯಾಟ್ ಮಾಡಿದ ಬಾರ್ಸಿಲೋನಾ ತಂಡ ಶುಭಾರಂಭ ಮಾಡಿತು. ಆದರೆ 6.1 ಓವರ್‌ಗಳ ನಂತರ 113 ರನ್​ಗೆ 4 ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡವನ್ನು ಅಲಿ ಹಸನ್ ಪಾರು ಮಾಡಿದರು. ಏಳನೇ ಓವರ್‌ನ ಎರಡನೇ ಎಸೆತದಿಂದ ಸತತ ಐದು ಸಿಕ್ಸರ್‌ಗಳನ್ನು ಬಾರಿಸಿದರು. ಆ ಬಳಿಕ ಎಂಟನೇ ಓವರ್ ನ 2, 3, 4 ಎಸೆತಗಳನ್ನು ಸಿಕ್ಸರ್​ಗೆ ಅಟ್ಟಿದರು. ಹಸನ್, ಸತತ 8 ಎಸೆತಗಳಲ್ಲಿ 8 ಸಿಕ್ಸರ್ ಗಳಿಸಿದರು. ಈ ಪಂದ್ಯದಲ್ಲಿ ಹಸನ್ 16 ಎಸೆತಗಳನ್ನು ಎದುರಿಸಿ 8 ಸಿಕ್ಸರ್ ಹಾಗೂ 1 ಬೌಂಡರಿ ನೆರವಿನಿಂದ 55 ರನ್ ಗಳಿಸಿ ಅಜೇಯರಾಗಿ ಉಳಿದರು.

ಅಲಿ ಹಸನ್ ಅವರ ಸ್ಫೋಟಕ ಆಟದ ನೆರವಿನಿಂದ ಪಾಕ್​ ಬಾರ್ಸಿಲೋನಾ ತಂಡ ನಿಗದಿತ 10 ಓವರ್‌ಗಳಲ್ಲಿ 4 ವಿಕೆಟ್‌ಗೆ 194 ರನ್ ಗಳಿಸಿತು. ಗುರಿ ಬೆನ್ನತ್ತಿದ ಯುನೈಟೆಡ್ ಸಿಸಿ ಗಿರೋನಾ ತಂಡ 9.4 ಓವರ್‌ಗಳಲ್ಲಿ 95 ರನ್‌ಗಳಿಗೆ ಆಲೌಟ್ ಆಯಿತು.

ಅಂದಹಾಗೆ 6 ಎಸೆತಗಳಲ್ಲಿ 6 ಸಿಕ್ಸರ್‌ಗಳು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಾಖಲೆಯಾಗಿದೆ. ಯುವರಾಜ್ ಸಿಂಗ್, ಕೀರನ್ ಪೊಲಾರ್ಡ್ ಮತ್ತು ಹರ್ಷಲ್ ಗಿಬ್ಸ್ ಒಂದೇ ಓವರ್‌ನಲ್ಲಿ 6 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ರವಿಶಾಸ್ತ್ರಿ ಜೊತೆಗೆ ಇತರರು ದೇಶೀಯ ಕ್ರಿಕೆಟ್‌ನಲ್ಲಿ 6 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಆದರೆ ಯಾವುದೇ ಕ್ರಿಕೆಟ್​ನಲ್ಲಿ 8 ಎಸೆತಗಳಲ್ಲಿ 8 ಸಿಕ್ಸರ್ ಬಾರಿಸಿದ್ದು ಇದೇ ಮೊದಲು. ಹೀಗಾಗಿ ಕ್ರಿಕೆಟ್​ ಜಗತ್ತು ನಿಬ್ಬೆರಗಾಗಿದೆ. (ಏಜೆನ್ಸೀಸ್​)

ಅಮರನ್​ ಚಿತ್ರತಂಡದ ಎಡವಟ್ಟಿನಿಂದ ವಿದ್ಯಾರ್ಥಿಯ ನೆಮ್ಮದಿ ಹಾಳು: 1 ಕೋಟಿ ರೂ. ಪರಿಹಾರಕ್ಕೆ ಆಗ್ರಹ! Amaran

ಭೂಮಿಯಲ್ಲಿ ಆಗುತ್ತಿದೆ ಈ ಬದಲಾವಣೆ…ತೀವ್ರ ಬರ, ಭಯಾನಕ ರೋಗಗಳು ಬರಲಿವೆ! ವಿಜ್ಞಾನಿಗಳ ಎಚ್ಚರಿಕೆ | Scientists warning

Share This Article

ನಿಮ್ಮ ನೆಚ್ಚಿನ ಹಣ್ಣುನ್ನು ಆಯ್ಕೆ ಮಾಡಿ.. ನಿಮ್ಮ ವ್ಯಕ್ತಿತ್ವವನ್ನು ತಿಳಿದುಕೊಳ್ಳಿ!.. Personality Test

Personality Test : ಒಬ್ಬ ವ್ಯಕ್ತಿ ಹೇಗಿದ್ದಾನೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ವ್ಯಕ್ತಿಯ ವ್ಯಕ್ತಿತ್ವವನ್ನು…

ಚಾಣಕ್ಯ ನೀತಿಯಲ್ಲಿನ ಈ 4 ವಿಷಯಗಳನ್ನು ನೆನಪಿನಲ್ಲಿಡಿ; ಸಂಬಂಧದಲ್ಲಿ ಮೋಸ ಹೋದ ನೋವನ್ನು ನೀವು ಅನುಭವಿಸಬೇಕಿಲ್ಲ.. | Chanakya Niti

ಕಾಲಾನಂತರದಲ್ಲಿ ಜನರ ಬದಲಾಗುತ್ತಿರುವ ಆಲೋಚನೆಗಳಲ್ಲಿ ನಿಜವಾದ ಪ್ರೀತಿ ಕಳೆದುಹೋಗುತ್ತಿದೆ. ಈ ಜಗತ್ತಿನಲ್ಲಿ ನಿಮ್ಮನ್ನು ಉತ್ಸಾಹದಿಂದ ಪ್ರೀತಿಸುವ…

ಹರಳೆಣ್ಣೆ ನೀರಿನಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ?; ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ| Health Tips

ಹರಳೆಣ್ಣೆಯನ್ನು ಆರೋಗ್ಯ ಮತ್ತು ಸೌಂದರ್ಯಕ್ಕಾಗಿ ಬಳಸಲಾಗುತ್ತದೆ ಎಂಬುದು ತಿಳಿದಿದೆಯೇ. ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಚರ್ಮ…