500 ಕಿ.ಮೀ. ದೂರದ ಸ್ವಗ್ರಾಮಕ್ಕೆ ಕಾಲ್ನಡಿಗೆಯಲ್ಲೇ ಹೊರಟವರು ಸ್ಮಶಾನ ಸೇರಿದ್ರು, ಮಾರ್ಗಮಧ್ಯೆ ಆಗಿದ್ದಾದರೂ ಏನು?

blank

ಉತ್ತರ ಪ್ರದೇಶ: ಲಾಕ್​ಡೌನ್​ ನಡುವೆಯೂ 500 ಕಿ.ಮೀ. ದೂರದಲ್ಲಿರುವ ತಮ್ಮೂರಿಗೆ ಕಾಲ್ನಡಿಗೆಯಲ್ಲೇ ಹೊರಟಿದ್ದ ಒಂದೇ ಕುಟುಂಬದ ಮೂವರು ದಿನಗೂಲಿ ಕಾರ್ಮಿಕರನ್ನು ಮನೆ ಸೇರುವ ಮೊದಲೇ ಮಾರ್ಗಮಧ್ಯೆ ಜವರಾಯನ ರೂಪದಲ್ಲಿ ಬಂದೆರಗಿದ ಟ್ರ್ಯಾಕ್ಟರ್​ ಸ್ಮಶಾನಕ್ಕೆ ದೂಡಿದೆ.

ಲಾಕ್​ಡೌನ್​ನಿಂದಾಗಿ ಕೆಲಸವೂ ಇಲ್ಲದೆ, ಇತ್ತ ಕೂಲಿಯೂ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ಉತ್ತರ ಪ್ರದೇಶ ಮೂಲದ ವಲಸೆ ಕಾರ್ಮಿಕರ ಗುಂಪು ದೆಹಲಿಯಿಂದ ತಮ್ಮೂರುಗಳಿಗೆ ನಡೆದುಕೊಂಡೇ ಹೋಗುತ್ತಿತ್ತು. ಈ ಗುಂಪಿನಲ್ಲಿ ಫತೇಪುರ ಜಿಲ್ಲೆ ಮೂಲದ ಸಹೋದರರಾದ ರಂಜಿತ್​ ಸಿಂಗ್​(44), ದಿನೇಶ್​(37) ಮತ್ತು ದಿನೇಶ್​ ಪತ್ನಿ ಸಂತಕುಮಾರಿ(32) ಕೂಡ ಇದ್ದರು. ಗುರುವಾರ ನಸುಕಿನಲ್ಲಿ ಮದ್ರಾಕ್ ಪ್ರದೇಶದಲ್ಲಿ ಟ್ರ್ಯಾಕ್ಟರ್​ ಮತ್ತು ಟ್ರಕ್​ ನಡುವೆ ಸಂಭವಿಸಿದ ಅಪಘಾತದಲ್ಲಿ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್​ ರಸ್ತೆಬದಿ ಹೋಗುತ್ತಿದ್ದ ದಿನಗೂಲಿ ಕಾರ್ಮಿಕರ ಮೇಲೂ ಹರಿದಿದೆ. ಸ್ಥಳದಲ್ಲೇ ರಂಜಿತ್​ ಸಿಂಗ್​ ಮತ್ತು ದಿನೇಶ್​ ಮೃತಪಟ್ಟಿದ್ದು, ತೀವ್ರವಾಗಿ ಗಾಯಗೊಂಡಿದ್ದ ಸಂತಕುಮಾರಿಯನ್ನು ಪೊಲೀಸರು ಆಸ್ಪತ್ರೆಗೆ ಸೇರಿಸಿದ್ದರಾದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದರು.

ಲಾಕ್​ಡೌನ್​ ಹಿನ್ನೆಲೆಯಲ್ಲಿ ಫತೇಪುರಕ್ಕೆ ಹೊರಟಿದ್ದ ದೆಹಲಿಯ ನರೇಲಾದಲ್ಲಿ ದಿನಗೂಲಿ ಕೆಲಸ ಮಾಡಿಕೊಂಡಿದ್ದ ಈ ಕುಟುಂಬ 130 ಕಿ.ಮೀ. ದೂರ ಕ್ರಮಿಸಿತ್ತಷ್ಟೆ. ಟ್ರಕ್​ ಚಾಲಕನ ವಿರುದ್ಧ ಎಫ್​ಐಆರ್​ ದಾಖಲಾಗಿದೆ ಎಂದು ಅಲಿಗರ್ ನ ಸರ್ಕಲ್​ ಇನ್​ಸ್ಪೆಕ್ಟರ್​ ಪರಶುರಾಮ್​ ಸಿಂಗ್​ತಿಳಿಸಿದ್ದಾರೆ. (ಏಜೆನ್ಸೀಸ್​)

ದುಪ್ಪಟ್ಟು ಟಿಕೆಟ್​ ದರಕ್ಕೆ ಬ್ರೇಕ್​ ಹಾಕಿದ ಸರ್ಕಾರ: ನಿಗದಿತ ದರದಲ್ಲೇ ಕಾರ್ಮಿಕರನ್ನು ಕರೆದೊಯ್ಯಲು ತೀರ್ಮಾನ

Share This Article

ನಿಮ್ಮ ಮಕ್ಕಳನ್ನು ಸ್ಮಾರ್ಟ್‌ಫೋನ್‌ಗಳಿಂದ ದೂರವಿಡುವುದು ಹೇಗೆ? Child Care Tips

Child Care Tips: ನೀವು ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಮೊಬೈಲ್ ಫೋನ್ ಕೊಡಬಾರದು. ನಿಮ್ಮ ಮಗು ನಿಮ್ಮೊಂದಿಗೆ…

ಈ 3 ರಾಶಿಯ ಮಹಿಳೆಯರು ಹುಟ್ಟಿನಿಂದಲೇ ಅಪಾರ ಬುದ್ಧಿಶಕ್ತಿ ಹೊಂದಿರುತ್ತಾರಂತೆ! ನಿಮ್ಮದೂ ಇದೇ ರಾಶಿನಾ? Zodiac Signs

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಯಾವ ರಾಶಿಚಕ್ರ ಮತ್ತು ನಕ್ಷತ್ರದಲ್ಲಿ…

ಬೇಸಿಗೆ ತಂಪಾಗಿರಲು ಹಾಲು ಹಾಕದ ಮಿಲ್ಕ್ ಶೇಕ್

ಬೇಸಿಗೆಯಲ್ಲೂ ನಮ್ಮನ್ನು ತಂಪಾಗಿಟ್ಟು, ಸಾಮಾನ್ಯವಾಗಿ ಆಗುವ ಸುಸ್ತನ್ನು ಕಡಿಮೆ ಮಾಡುವ ವಿಶೇಷ ಮಿಲ್ಕ್ ಶೇಕ್ ಬಗ್ಗೆ…