ರಾಯಚೂರು: ಸಾರಿಗೆ ಬಸ್ ಮತ್ತು ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಐವರು ಸ್ಥಳದಲ್ಲೇ ಮೃತಪಟ್ಟ ಘಟನೆ ಆಂಧ್ರದ ಪೆದ್ದ ತುಂಬಳಮಂ ಬಳಿ ಮಂಗಳವಾರ (ಮಾ.11) ಸಂಭವಿಸಿದೆ.
ಗಂಗಾವತಿಯಿಂದ ಕರ್ನೂಲ್ ಜಿಲ್ಲೆಯ ಆದೋನಿಗೆ ತೆರಳುವಾಗ ಮಾರ್ಗ ಮಧ್ಯೆ ಅದೋನಿಯಿಂದ ಎರಡು ಬೈಕ್ ತೆರಳುವ ವೇಳೆಗೆ ಈ ಭೀಕರ ಅಪಘಾತ ಸಂಭವಿಸಿದೆ. ಎರಡು ಬೈಕ್ನಲ್ಲಿದ್ದ ಒಟ್ಟು 5 ಜನ ಸ್ಥಳದಲ್ಲಿಯೇ ಪ್ರಾಣಬಿಟ್ಟಿದ್ದಾರೆ.
ಬಸ್ನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಂಧ್ರದ ಇಬ್ಬರು ಮತ್ತು ಮಾನ್ವಿಯ ಮೂರು ಜನ ಮೃತಪಟ್ಟಿದ್ದಾರೆ.
ಈ ಕುರಿತು ಮಾದವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಮಾಣಿಕ್ಯ’ ನಟಿಗೆ ತಪ್ಪದ ಕಂಟಕ! ‘ಚಿನ್ನ’ದ ಬೆಡಗಿ ನಿವಾಸಕ್ಕೆ CBI ಎಂಟ್ರಿ, ಮದುವೆ ವಿಡಿಯೋ, ಗಿಫ್ಟ್… | Ranya Rao