More

    ಹೊಸವರ್ಷ ಆಚರಣೆ ವೇಳೆ 5 ಮಂದಿ ಸಾವು

    ಬೆಂಗಳೂರು: ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮಂಗಳವಾರ ರಾತ್ರಿ ವಿವಿಧೆಡೆ ಸಂಭವಿಸಿದ ಪ್ರತ್ಯೇಕ ಅಪಘಾತ, ಹತ್ಯೆ ಪ್ರಕರಣದಲ್ಲಿ ಐವರು ಮೃತಪಟ್ಟಿದ್ದಾರೆ.

    ಬೈಕ್ ಡಿಕ್ಕಿ: ವರ್ಷಾಚರಣೆ ಮುಗಿಸಿಕೊಂಡು ರಾತ್ರಿ ಬೈಕ್​ನಲ್ಲಿ ಮನೆಗೆ ತೆರಳುತ್ತಿದ್ದ ಮೊಳಕಾಲ್ಮೂರು ಪಟ್ಟಣದ ನಿವಾಸಿ ಧಮೇಂದ್ರ (25) ಹಾನಗಲ್ ಬಳಿ ಸೇತುವೆಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಿಂಬದಿ ಕುಳಿತಿದ್ದ ದಿಲೀಪ್ ಸ್ಥಿತಿ ಗಂಭೀರವಾಗಿದೆ. ವರ್ಷಾಚರಣೆಗೆಂದು ಬೈಕ್​ನಲ್ಲಿ ಕೇಕ್ ತರುತ್ತಿದ್ದ ಶ್ರೀಕಾಂತ್(24) ಮತ್ತು ಎದುರಿನಿಂದ ಬಂದ ಮತ್ತೊಂದು ಬೈಕ್ ರಾಯಚೂರಿನ ಕಡಗಂದೊಡ್ಡಿ ಕ್ರಾಸ್ ಬಳಿ ಮುಖಾಮುಖಿ ಡಿಕ್ಕಿಯಾಗಿದೆ. ಶ್ರೀಕಾಂತ್ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.

    ಹೊಂಡಕ್ಕೆ ಬಿದ್ದು ಸಾವು: ಸಕಲೇಶಪುರ ತಾಲೂಕಿನ ಹೊಸಗದ್ದೆ ಮೀಸಲು ಅರಣ್ಯದಲ್ಲಿ ಸ್ನೇಹಿತನ ಜತೆ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಜಮ್ಮನಹಳ್ಳಿಯ ಅರುಣ್​ಕುಮಾರ್(28) ಸಮೀಪದ ಕ್ವಾರಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾನೆ.

    ಅಮಾನುಷ ಹತ್ಯೆ: ನಂಜನಗೂಡು ತಾಲೂಕಿನ ತಾಂಡಾ ಕೈಗಾರಿಕಾ ಪ್ರದೇಶದಲ್ಲಿ ತಡರಾತ್ರಿ ಸ್ನೇಹಿತರ ಜತೆ ಪಾರ್ಟಿಗೆ ತೆರಳಿದ್ದ ಅಡಕನಹಳ್ಳಿಹುಂಡಿಯ ಕೃಷ್ಣ(20) ಅಮಾನುಷವಾಗಿ ಕೊಲೆಯಾಗಿದ್ದಾನೆ. ಕೃಷ್ಣನನ್ನು ಆತನ ಸ್ಕೂಟರ್ ಜತೆ ಸೇರಿಸಿ ದೊಡ್ಡ ವಾಹನವೊಂದರಿಂದ ಸುಮಾರು 2 ಕಿ.ಮೀ.ವರೆಗೆ ರಸ್ತೆಯಲ್ಲಿ ಎಳೆದೊಯ್ದ ಸ್ಥಿತಿಯಲ್ಲಿ ಬುಧವಾರ ಬೆಳಗ್ಗೆ ಮೃತದೇಹ ಪತ್ತೆಯಾಗಿದೆ. ಸ್ನೇಹಿತರು ತಲೆಮರೆಸಿಕೊಂಡಿದ್ದಾರೆ.

    ಘರ್ಷಣೆಗೆ ಬಲಿ: ಭಾಲ್ಕಿ ತಾಲೂಕಿನ ಸಿಕಂದರಾಬಾದ್ ವಾಡಿ ಗ್ರಾಮದಲ್ಲಿ ರಾತ್ರಿ 11ರ ವೇಳೆಗೆ ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾರಾಮಾರಿ ನಡೆದು ಝುರೆಪ್ಪ ಭೀಮಣ್ಣ (30) ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.

    ಚಾಕು ಇರಿತ: ಹಾಸನದ ವೈದ್ಯ ವಿಜ್ಞಾನ ಸಂಸ್ಥೆ ವಿದ್ಯಾರ್ಥಿಗಳು ರಾತ್ರಿ ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿಕೊಂಡಿದ್ದು, ಶಿವಮೊಗ್ಗ ಮೂಲದ ವಿದ್ಯಾರ್ಥಿ ಮಾರುತಿ(19)ಗೆ ಚಾಕುವಿನಿಂದ ಇರಿಯ ಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಪುಂಡರ ಹಾವಳಿ

    ಬೆಂಗಳೂರಿನ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್​ನಲ್ಲಿ ಯುವತಿಯರೊಂದಿಗೆ ಯುವಕರು ಅಸಭ್ಯವಾಗಿ ವರ್ತಿಸಿದ ವಿಡಿಯೋ ವೈರಲ್ ಆಗಿವೆ. ಮೈ ಮುಟ್ಟಲು ಯತ್ನಿಸಿದ ಯುವಕರಿಗೆ ಗೂಸಾ ಕೊಟ್ಟು ಪೊಲೀಸರಿಗೆ ಹಿಡಿದುಕೊಟ್ಟ ಪ್ರಕರಣಗಳೂ ನಡೆದಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts