ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಹಾರಿ ಪಲ್ಟಿ ಹೊಡೆದ ಕಾರು; ಬೈಕ್​ ಸವಾರ ಸೇರಿ ಐವರು ದುರ್ಮರಣ

ಚೆನ್ನೈ: ದೇವರ ಉತ್ಸವ ಮುಗಿಸಿಕೊಂಡು ವಾಪಸ್​ ಆಗುತ್ತಿದ್ದ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದು ಕುಟುಂಬದ ನಾಲ್ವರು ಸೇರಿದಂತೆ ಐವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಮಿಳುನಾಡಿನ ತಿರುಮಂಗಲಂ ಬಳಿಯ ವಿರುದುನಗರ-ಮದುರೈ ಹೆದ್ದಾರಿಯ ಶಿವರಕೊಟ್ಟೈನಲ್ಲಿ ನಡೆದಿದೆ. ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಮೃತರನ್ನು ಮಣಿ, ನಾಗಜ್ಯೋತಿ, ಕನಗವೇಲ್, ಕೃಷ್ಣವೇಣಿ ಮತ್ತು ಪಾಂಡಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. 8 ವರ್ಷದ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. … Continue reading ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಹಾರಿ ಪಲ್ಟಿ ಹೊಡೆದ ಕಾರು; ಬೈಕ್​ ಸವಾರ ಸೇರಿ ಐವರು ದುರ್ಮರಣ