40 ಸಿಬ್ಬಂದಿಗೆ ವಾಕರಸಾಸಂ ಶಾಕ್

blank

ಕಾರವಾರ: ಸರ್ಕಾರದ ಮನವಿಗೂ ಸ್ಪಂದಿಸದೇ ಪ್ರತಿಭಟನೆ ಮುಂದುವರಿಸಿರುವ ಎನ್​ಡಬ್ಲು್ಯಕೆಆರ್​ಟಿಸಿ 40 ನೌಕರರಿಗೆ ಸಂಸ್ಥೆಯು ಶಾಕ್ ನೀಡಿದೆ.

30 ಕಂಡಕ್ಟರ್ ಹಾಗೂ ಡ್ರೖೆವರ್​ಗಳು, 10 ತಾಂತ್ರಿಕ ನೌಕರರನ್ನು ಬೇರೆ ಘಟಕಗಳಿಗೆ ವರ್ಗಾವಣೆ ಮಾಡಿ ಆದೇಶ ನೀಡಲಾಗಿದೆ.

ಕಳೆದ ನಾಲ್ಕು ದಿನದಿಂದ ಸಾರಿಗೆ ಮುಷ್ಕರ ನಡೆದಿದೆ. ಜಿಲ್ಲೆಯಲ್ಲಿ ತರಬೇತಿ ಅವಧಿಯಲ್ಲಿರುವ ಸಾಕಷ್ಟು ನೌಕರರಿಗೆ ಸಾರಿಗೆ ಇಲಾಖೆ ಕೆಲಸಕ್ಕೆ ಹಾಜರಾಗುವಂತೆ ನೋಟಿಸ್ ನೀಡಿ, ಕಾನೂನು ಕ್ರಮಕ್ಕೆ ಮುಂದಾಗಿದೆ.

ಕುಮಟಾದಲ್ಲಿ ಸಾರಿಗೆ ನೌಕರರು ಕ್ವಾರ್ಟರ್ಸ್ ಬಿಡುವಂತೆ ನೋಟಿಸ್ ನೀಡಲಾಗಿದ್ದರೂ ನಂತರ ಅದನ್ನು ಹಿಂಪಡೆಯಲಾಗಿದೆ ಎಂದು ಶಿರಸಿ ವಿಭಾಗೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಐದು ಬಸ್​ಗಳ ಓಡಾಟ ಅಂಕೋಲಾ: ಏಪ್ರಿಲ್ 7 ರಿಂದ ಆರಂಭವಾದ ಸಾರಿಗೆ ನೌಕರರ ಮುಷ್ಕರ 4ನೇ ದಿನ ಪೂರೈಸಿದ್ದು, ಶನಿವಾರ ಸಾರಿಗೆ ಸಂಸ್ಥೆಯ ಅಂಕೋಲಾ ಘಟಕದಿಂದ ಪ್ರಯಾಣಿಕರ ಅನುಕೂಲಕ್ಕಾಗಿ 5 ಬಸ್​ಗಳು ವಿವಿಧ ಮಾರ್ಗಗಳಲ್ಲಿ ಸಂಚಾರ ಆರಂಭಿಸಿವೆ. ಇಲ್ಲಿನ ಘಟಕದಲ್ಲಿ ಚಾಲಕ ಮತ್ತು ನಿರ್ವಹಕ ಸೇರಿ ಒಟ್ಟು 158 ನೌಕರರು ಇದ್ದು, ಅವರಲ್ಲಿ 10 ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಪ್ರಯಾಣಿಕರ ಬೇಡಿಕೆ ಪರಿಶೀಲಿಸಿ, ಹೆಚ್ಚಿನ ಪ್ರಯಾಣಿಕರಿಗೆ ಉಪಯುಕ್ತವಾದ ಯಲ್ಲಾಪುರ, ಕಾರವಾರ, ಕುಮಟಾ, ಗೋಕರ್ಣ ಹಾಗೂ ಮಂಜಗುಣಿ ಮಾರ್ಗಗಳಿಗೆ ಬಸ್ ಸಂಚಾರ ನಡೆಸುವಂತೆ ಸೂಚನೆ ನೀಡಿರುವುದಾಗಿ ಘಟಕ ವ್ಯವಸ್ಥಾಪಕ ಯುಗ ಬಾನವಳಿಕರ ವಿಜಯವಾಣಿಗೆ ತಿಳಿಸಿದ್ದಾರೆ.

Share This Article

ಬೇಸಿಗೆಯಲ್ಲಿ ಈ 5 ಪದಾರ್ಥಗಳೊಂದಿಗೆ ಅಪ್ಪಿ ತಪ್ಪಿಯೂ ಮೊಸರು ತಿನ್ನಬೇಡಿ! | Yogurt

Yogurt : ಬೇಸಿಗೆಯಲ್ಲಿ, ಮೊಸರು ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ. ಆದರೆ, ಮೊಸರಿನೊಂದಿಗೆ ಅಥವಾ ಅದರ…

ಬಸ್ಸು ಅಥವಾ ಕಾರಿನಲ್ಲಿ ಪ್ರಯಾಣಿಸುವಾಗ ವಾಂತಿ ಬರೊದೇಕೆ ಗೊತ್ತೆ!; ತಡೆಗಟ್ಟೊದೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ | Vomit

Vomit : ಕೆಲವರಿಗೆ ಬಸ್​ ಮತ್ತು ಕಾರಿನಲ್ಲಿ ಪ್ರಯಾಣ ಮಾಬೇಕಾದರೆ ಸಲ್ಪ ದೂರು ಪ್ರಯಾಣಿಸಿದ ಬಳಿಕ…

ನಕಲಿ vs ಅಸಲಿ ಕಲ್ಲಂಗಡಿ ಹಣ್ಣು: ಪತ್ತೆಹಚ್ಚುವುದು ಹೇಗೆ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ… Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…