ಸ್ವಲ್ಪ ಉಸಿರು ಬಿಡುವಂತಾದ ಯುವರತ್ನ; ನಿರ್ಮಾಪಕರು, ಚಿತ್ರಮಂದಿರ ಮಾಲೀಕರಿಗೆ 4 ದಿನ ಕೊಂಚ ನಿರಾಳ!

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಒಂದೆರಡು ದಿನಗಳಿಂದ ಉಂಟಾಗಿದ್ದ ಉಸಿರುಗಟ್ಟಿಸುವ ವಾತಾವರಣ ಸದ್ಯಕ್ಕೆ ನಿವಾರಣೆಯಾಗಿದ್ದು, ‘ಯುವರತ್ನ’ ಸ್ವಲ್ಪ ಉಸಿರಾಡುವಂತಾಗಿದೆ. ಆದರೆ ಈ ನಿರಾಳತೆ ಇನ್ನೊಂದು ಮೂರು ದಿನಗಳ ಕಾಲವಷ್ಟೇ ಇರಲಿದ್ದು, ಆಮೇಲೇನು ಎಂಬ ಚಿಂತೆ ಇನ್ನೂ ದೂರವಾಗಿಲ್ಲ. ಕರೊನಾ ಸೋಂಕು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಕೆಲವು ನಿರ್ಬಂಧಗಳನ್ನು ವಿಧಿಸಿದ್ದ ರಾಜ್ಯ ಸರ್ಕಾರ, ಚಿತ್ರಮಂದಿರಗಳಲ್ಲಿ ಶೇ. 50 ಆಸನ ಭರ್ತಿಗಷ್ಟೇ ಅವಕಾಶ ಇದೆ ಎಂದು ಸೂಚಿಸಿತ್ತು. ಹೀಗಾಗಿ ಮೊನ್ನೆಮೊನ್ನೆಯಷ್ಟೇ ಬಿಡುಗಡೆಯಾಗಿದ್ದ ಯುವರತ್ನ ಸಿನಿಮಾ ಕಲೆಕ್ಷನ್​ಗೂ ದೊಡ್ಡ ಹೊಡೆತ ಬಿದ್ದಿದ್ದಲ್ಲದೆ, ಚಿತ್ರರಂಗದ ಇತರ … Continue reading ಸ್ವಲ್ಪ ಉಸಿರು ಬಿಡುವಂತಾದ ಯುವರತ್ನ; ನಿರ್ಮಾಪಕರು, ಚಿತ್ರಮಂದಿರ ಮಾಲೀಕರಿಗೆ 4 ದಿನ ಕೊಂಚ ನಿರಾಳ!