ರತ್ನಪುರಿಯಲ್ಲಿ 3ನೇ ದಿನದ ಗಂಧೋತ್ಸವ ಸಂಪನ್ನ

blank

ಹುಣಸೂರು: ತಾಲೂಕಿನ ರತ್ನಪುರಿ ಗ್ರಾಮದಲ್ಲಿ ಕೋಮು ಸಾಮರಸ್ಯಕ್ಕೆ ಹೆಸರಾದ ಶ್ರೀ ಆಂಜನೇಯಸ್ವಾಮಿ ಪಲ್ಲಕ್ಕಿ ಉತ್ಸವ ಮತ್ತು ಜಮಾಲ್ ಬೀ ಅಮ್ಮನವರ ಉರುಸ್ (ಗಂಧೋತ್ಸವ)ನ ಮೂರನೇ ದಿನದ ಗಂಧೋತ್ಸವ ಕಾರ್ಯಕ್ರಮ ಭಾನುವಾರ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಭಾನುವಾರ ಸಂಜೆ ಹುಣಸೂರಿನ ಧರ್ಮ ಗುರು ಮುರ್ಷದ್ ನೇತೃತ್ವದಲ್ಲಿ ಪಕ್ಕದ ಗ್ರಾಮಗಳಾದ ಕುಡೀನೀರು ಮುದ್ದನಹಳ್ಳಿ, ಹುಣಸೂರಿನಿಂದ ಗಂಧವನ್ನು ಮೆರವಣಿಗೆಯಲ್ಲಿ ತಂದು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಇಸ್ಲಾಂ ಧರ್ಮ ಗುರುಗಳು ಹಾಗೂ ಹರಕೆ ಹೊತ್ತ ಭಕ್ತರು ಕಬ್ಬಿಣದ ಅಯುಧಗಳಿಂದ ಮೈಗೆ ಚುಚ್ಚಿಕೊಂಡು ಭಕ್ತರಲ್ಲಿ ಆಚ್ಚರಿ ಮೂಡಿಸಿದರು. ಜಮಾಲ್ ಬೀಬೀ ದರ್ಗಾದಲ್ಲಿ ಹಿಂದು ಧರ್ಮದವರು ಚಾದರ್ ಹೊದಿಸಿ ಹರಕೆ ಸಲ್ಲಿಸಿದರು.

ಹರಕೆ ಹೊತ್ತ ಮುಸ್ಲಿಂರು ಹಾಗೂ ಹಿಂದುಗಳು ಸಿಹಿ ಬೂಂದಿ ಹಾಗೂ ಹೂಗಳನ್ನು ಜಮಾಲ್ ಬೀ ಅಮ್ಮನ ಸನ್ನಿಧಾನಕ್ಕೆ ಸಲ್ಲಿಸಿ ಹರಕೆ ತೀರಿಸುವುದು ಇಲ್ಲಿನ ವಾಡಿಕೆ. ಹರಕೆ ಹೊತ್ತ ಹಿಂದು ಮಹಿಳೆಯರು ಕೂಡ ಹೂ, ಸಿಹಿಬೂಂದಿ ಅಂಗಡಿಗಳ ಹತ್ತಿರ ಸರತಿ ಸಾಲಿನಲ್ಲಿ ನಿಂತು ಖರೀದಿಸಿ ಹರಕೆ ತೀರಿಸಿದರು.

ಕುಡಿನೀರು ಮುದ್ದನಹಳ್ಳಿ, ಹಳ್ಳದಕೊಪ್ಪಲು ನಂಜಾಪುರ, ಗೌರಿಪುರ, ಸಿಬಿಟಿ ಕಾಲೋನಿ, ಧರ್ಮಾಪುರ, ಸಂತೆಕೆರೆಕೊಡಿ, ತರಿಕಲ್ಲು, ಗದ್ದಿಗೆ, ಉದ್ದೂರು, ವಿನೋಬಾ ಕಾಲನಿ ಸೇರಿದಂತೆ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು.

ಗಂಧೋತ್ಸವದಲ್ಲಿ ಜಾಮಿಯ ಕಮಿಟಿ ಅಧ್ಯಕ್ಷ ಎಸ್.ಪಿ.ಚಾಂದ್, ಕಾರ್ಯದರ್ಶಿ ಇರ್ಷಾದ್ ಅಲಿ ಖಾನ್, ಮುಂಖಡರಾದ ಅಜ್ಗರ್ ಪಾಷ, ವಿಜೇಂದ್ರಕುಮಾರ್, ನೂರ್ ಅಹಮದ್, ಬಷಿರ್ ಅಹಮದ್, ಅನ್ವರ್ ಪಾಷ, ಸಾದಿಕ್, ಮಹಮದ್ ಚಾಂದ್ ಇತರರಿದ್ದರು.

 

 

 

Share This Article

ಕನಸಿನಲ್ಲಿ ಈ ಮೂರು ಪಕ್ಷಿಗಳು ಕಂಡ್ರೆ ಲಾಟರಿ ಹೊಡೆದಂತೆ! Lucky Birds ನೀಡುವ ಸುಳಿವೇನು..?

Lucky Birds : ಸಾಮಾನ್ಯವಾಗಿ ನಿದ್ದೆಯಲ್ಲಿ ಕನಸು ಕಾಣೋದು ಸಹಜ. ಈ ಕನಸುಗಳ ಮೂಲಕ ಪ್ರಕೃತಿ…

ಯಾವ ಕಾರಣಕ್ಕೂ ಮಾವಿನ ವಾಟೆ ಎಸೆಯಬೇಡಿ…ಅದರ ಪ್ರಯೋಜನಗಳ ಬಗ್ಗೆ ತಿಳಿದ್ರೆ ನೀವು ಖಂಡಿತ ಅಚ್ಚರಿಪಡ್ತೀರಾ! Mango Kernels

Mango Kernels : ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯುತ್ತಾರೆ. ರುಚಿಗೆ ಮಾತ್ರವಲ್ಲ, ಮಾವಿನ…

ಪ್ಲಾಸ್ಟಿಕ್ ಬಾಕ್ಸ್​​ನಲ್ಲಿ ಬಿಸಿ ಅನ್ನ ಇಡುವ ಅಭ್ಯಾಸವಿದೆಯೇ? ಆರೋಗ್ಯದ ಬಗ್ಗೆ ಇರಲಿ ಎಚ್ಚರ.. hot rice in plastic boxes

hot rice in plastic boxes: ಪ್ಲಾಸ್ಟಿಕ್ ಬಳಕೆಯನ್ನು ತಡೆಯಲಾಗುತ್ತಿಲ್ಲ. ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸುವುದು ಹಾನಿಕಾರಕ,…