ಶಾಲೆಯಿಂದ ಹೊರಟ 2ನೇ ತರಗತಿ ವಿದ್ಯಾರ್ಥಿನಿ ಮನೆಗೆ ತಲುಪಲೇ ಇಲ್ಲ; ಕಾಲುಸಂಕಕ್ಕೆ ಪ್ರಾಣವೇ ಸುಂಕ!?

ಉಡುಪಿ: ಶಾಲೆಯಿಂದ ಹೊರಟ ಎರಡನೇ ತರಗತಿಯ ವಿದ್ಯಾರ್ಥಿನಿ ಮನೆಗೆ ತಲುಪದೇ ಇರುವಂಥ ಪ್ರಕರಣವೊಂದು ನಡೆದಿದೆ. ದುರಂತವೆಂದರೆ ಮನೆಯ ದಾರಿಯಲ್ಲಿನ ಕಾಲುಸಂಕಕ್ಕೆ ಈಕೆಯ ಪ್ರಾಣವೇ ಸುಂಕವಾಗಿದೆ ಎನ್ನಲಾಗಿದೆ. ಅರ್ಥಾತ್, ಕಾಲುಸಂಕದಿಂದ ಜಾರಿ ಬಿದ್ದ ಈ ವಿದ್ಯಾರ್ಥಿನಿ ನೀರುಪಾಲಾಗಿದ್ದಾಳೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಬೀಜದಮಕ್ಕಿ ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಸನ್ನಿಧಿ (7) ನೀರುಪಾಲಾದ ಬಾಲಕಿ. ಈಕೆ ಇಲ್ಲಿನ ಚಪ್ಪರಿಕೆ ಎಂಬಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಈಕೆ ಬೊಳಂಬಳ್ಳಿಯ … Continue reading ಶಾಲೆಯಿಂದ ಹೊರಟ 2ನೇ ತರಗತಿ ವಿದ್ಯಾರ್ಥಿನಿ ಮನೆಗೆ ತಲುಪಲೇ ಇಲ್ಲ; ಕಾಲುಸಂಕಕ್ಕೆ ಪ್ರಾಣವೇ ಸುಂಕ!?