More

    ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟಕ್ಕೆ ಚಾಲನೆ

    ಸೋಮವಾರಪೇಟೆ: ಒಕ್ಕಲಿಗರ ಯುವ ವೇದಿಕೆ, ರಾಜ್ಯ ಅಮೇಚೂರ್ ಕಬಡ್ಡಿ ಅಸೋಸಿಯೇಷನ್ ವತಿಯಿಂದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶನಿವಾರ ಸಂಜೆ ಅಂತರ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗೆ ಚಾಲನೆ ಸಿಕ್ಕಿತು.


    ಪಟ್ಟಣದಲ್ಲಿ 4ನೇ ಬಾರಿ ಆಯೋಜನೆಗೊಂಡಿರುವ ರೋಚಕ ಪಂದ್ಯಾಟವನ್ನು ಸಾವಿರಾರು ಕಬಡ್ಡಿ ಪ್ರೇಮಿಗಳು ಕಣ್ತುಂಬಿಕೊಂಡರು.


    ಗ್ರೂಪ್ ‘ಎ’ ಯಲ್ಲಿ ಬ್ಯಾಂಕ್ ಆಫ್ ಬರೋಡ ಬೆಂಗಳೂರು, ತಮಿಳುನಾಡಿನ ದೊರೈ ಸಿಂಗಂ, ಕೇರಳದ ಜೆ.ಕೆ.ಅಕಾಡೆಮಿ, ಕೊಲ್ಲಾಪುರದ ಸಂಜಯ್ ಗೋದಾವತ್, ಗ್ರೂಪ್ ‘ಬಿ’ ಯಲ್ಲಿ ಹೈದರಾಬಾದ್‌ನ ಸೌತ್ ಸೆಂಟ್ರಲ್ ರೈಲ್ವೆ, ಕರ್ನಾಟಕ ತಂಡ, ತಮಿಳುನಾಡಿನ ದೈತ್ಯ, ಬೆಂಗಳೂರಿನ ಎಚ್.ಎಂ.ಟಿ ಕಾಲನಿ ಬಾಯ್ಸ್, ಗ್ರೂಪ್ ‘ಸಿ’ ಯಲ್ಲಿ ಮುಂಬೈಯ ಏರ್ ಇಂಡಿಯಾ, ಕರ್ನಾಟಕ ಯೂತ್ಸ್, ತಮಿಳುನಾಡಿನ ಜಯಚಿತ್ರ, ಕೆಎಸ್‌ಪಿ ಬೆಂಗಳೂರು ಗ್ರೂಪ್ ‘ಡಿ’ಯಲ್ಲಿ ಮುಂಬೈಯ ಯುವ ಪಂಟನ್, ಹರಿಯಾಣದ ಎನ್‌ಯುಎಸ್‌ಸಿ, ಕೇರಳ ಡಿಸ್ಟಿಕ್ ಹಾಗೂ ಕೊಡಗು ಡಿಸ್ಟಿಕ್ ತಂಡಗಳ ನಡುವೆ ಲೀಗ್ ಪಂದ್ಯಾಟಗಳು ನಡೆದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts