More

    ಸಾಗರದಲ್ಲಿ ಮನೆ ಮನೆಗೆ ವಿತರಿಸಿದ್ದ ರಾಷ್ಟ್ರಧ್ವಜಗಳಲ್ಲಿ ಲೋಪ

    ಸಾಗರ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ತಾಲೂಕು ಆಡಳಿತದಿಂದ ಮನೆ ಮನೆಗೆ ಉಚಿತವಾಗಿ ನೀಡಿರುವ ಕೆಲವು ರಾಷ್ಟ್ರಧ್ವಜಗಳಲ್ಲಿ ಲೋಪಗಳು ಕಂಡುಬಂದಿವೆ.
    ಸಾಗರ ನಗರಸಭೆ ಆವರಣದಲ್ಲಿ ಧ್ವಜಗಳ ಸಿದ್ಧತೆ ನಡೆಯುತ್ತಿರುವಾಗ ಬಾವುಟದಲ್ಲಿ ಬಣ್ಣಗಳ ಅನುಕ್ರಮಣಿಕೆ ಬದಲಾಗಿರುವುದನ್ನು ತಕ್ಷಣ ಗಮನಿಸಲಾಗಿದೆ. ಕೆಲವು ಧ್ವಜಗಳಲ್ಲಿ ಅಶೋಕ ಚಕ್ರ ತುದಿಗೆ ಮುದ್ರಣಗೊಂಡಿದೆ. ಇವೆಲ್ಲವನ್ನೂ ನಾಗರಿಕರು ಗಮನಿಸಿ ಆಯೋಜಕರಿಗೆ ಮಾಹಿತಿ ನೀಡಿದ್ದಾರೆ.
    ಸಾಗರ ತಾಲೂಕಿನ ಅರಳಗೋಡು ಗ್ರಾಪಂ ಕಚೇರಿಯಲ್ಲಿ ಮನೆ ಮನೆಗೆ ರಾಷ್ಟ್ರಧ್ವಜ ಕಾರ‌್ಯಕ್ರಮಕ್ಕೆ ಪೂರಕವಾಗಿ ಸಂಗ್ರಹಿಸಲಾದ ಧ್ವಜವೊಂದರಲ್ಲಿನ ಅಶೋಕ ಚಕ್ರವು ನಿರ್ದಿಷ್ಟ ಸ್ಥಳದಲ್ಲಿ ಇಲ್ಲ ಎಂಬ ಸಂಗತಿ ಗಮನಕ್ಕೆ ಬಂದಿದೆ. ಬಿಳಿ ಬಣ್ಣದ ಪಟ್ಟಿಯ ಮಧ್ಯದಲ್ಲಿರಬೇಕಾದ ಅಶೋಕ ಚಕ್ರ ಸ್ವಲ್ಪ ಬದಿಗೆ ಮುದ್ರಣವಾಗಿದೆ. ಸ್ವಾಂತಂತ್ರೃದ ಅಮೃತ ಮಹೋತ್ಸವದ ಸಂದರ್ಭ ಧ್ವಜ ಬಳಕೆಯ ವಿಚಾರದಲ್ಲಿ ಎಚ್ಚರ ವಹಿಸಬೇಕು. ಲೋಪ ಸರಿಪಡಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts