More

    ವಿಜಯ ಮಹಾಂತೇಶ ಶ್ರೀಗಳ ಕಂಚಿನ ಮೂರ್ತಿ ಮೆರವಣಿಗೆ

    ಹುನಗುಂದ: ಪಟ್ಟಣದಲ್ಲಿ ವಿಜಯ ಮಹಾಂತೇಶ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿ ಸದಸ್ಯರು ಮತ್ತು ಬ್ಯಾಂಕ್ ಸಿಬ್ಬಂದಿ ವರ್ಗದಿಂದ ಎಸ್‌ಬಿಐ ಬ್ಯಾಂಕ್ ಬಳಿ ಪ್ರತಿಷ್ಠಾಪಿಸಲಿರುವ ಶ್ರೀ ವಿಜಯ ಮಹಾಂತೇಶ ಶಿವಯೋಗಿಗಳ ಕಂಚಿನ ಮೂರ್ತಿ ಮೆರವಣಿಗೆ ಭಾನುವಾರ ನಡೆಯಿತು.

    ಇಳಕಲ್ಲ ನಗರದಿಂದ ಆಗಮಿಸಿದ ಮೂರ್ತಿಗೆ ಪಟ್ಟಣದಲ್ಲಿ ಭವ್ಯ ಸ್ವಾಗತ ಕೋರಿ, ನಂತರ ಪ್ರಮುಖ ಬೀದಿಗಳಲ್ಲಿ ಡೊಳ್ಳು ಸೇರಿ ವಿವಿಧ ವಾದ್ಯಮೇಳ ಹಾಗೂ ಪಟಾಕಿ ಸಿಡಿಸಿ ಅದ್ದೂರಿ ಮೆರವಣಿಗೆ ನಡೆಸಲಾಯಿತು.

    ವಿ.ಮ. ಬ್ಯಾಂಕ್ ಅಧ್ಯಕ್ಷ ರವಿ ಹುಚನೂರ, ಉಪಾಧ್ಯಕ್ಷ ದೇವು ಡಂಬಳ, ನಿರ್ದೇಶಕರಾದ ಶಶಿಕಾಂತ ಪಾಟೀಲ, ರಾಜು ನಾಡಗೌಡರ, ನಿರ್ದೇಶಕರಾದ ಮಹಾಂತೇಶ ಅವಾರಿ, ಸಂಗಣ್ಣ ಕಡಪಟ್ಟಿ, ಬಿ.ವಿ. ಪಾಟೀಲ, ರಾಜಕುಮಾರ ಬಾದವಾಡಗಿ, ಶಿವಾನಂದ ಕಂಠಿ, ಸುಜಾತ ನಾಗರಾಳ, ಬಸವರಾಜ ಗದ್ದಿ, ನೀಲಪ್ಪ ತಪೇಲಿ, ಮಲ್ಲಪ್ಪ ವೀರಾಪುರ, ಸೋಮಶೇಖರ ಬಲಕುಂದಿ, ಮಂಜುನಾಥ ಆಲೂರ, ತಿರುಪತಿ ಕುಷ್ಟಗಿ, ಲಕ್ಷ್ಮಿಬಾಯಿ ಮುಕ್ಕಣ್ಣವರ, ಅನ್ನಪೂರ್ಣ ಹೊಸೂರ, ಸುಜಾತ ನಾಗರಾಳ ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ ಕಾಮಾ, ಉಪಪ್ರಧಾನ ವ್ಯವಸ್ಥಾಪಕ ಜಗದೀಶ ಪಾಟೀಲ, ಬ್ಯಾಂಕ್ ಸಿಬ್ಬಂದಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts