ಚಿತ್ರದುರ್ಗ:ಜಿಲ್ಲೆಯಲ್ಲಿ ಪ್ರತಿಷ್ಠಾಪಿಸಿರುವ ಪ್ರಮುಖ ಗಣಪತಿಗಳ ವಿಸರ್ಜನಾ ಮೆರವಣಿಗೆ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಕಾ ಪಾಡುವ ಸಲುವಾಗಿ ಗಣಪತಿ ವಿಸರ್ಜನೆ ನಡೆಯುವ ಸ್ಥಳಗಳ ಸುತ್ತಮುತ್ತಲಿನ 10 ಕಿ.ಮೀ.ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿ ಲ್ಲಾಧಿಕಾರಿ ಜಿಆರ್ಜೆ ದಿವ್ಯಾಪ್ರಭು ಅವರು ಆದೇಶಿಸಿದ್ದಾರೆ.
ಸೆ.24ರಂದು ಮೊಳಕಾಲ್ಮೂರು,26ರಂದು ಹೊಸದುರ್ಗ,27ರಂದು ಭರಮಸಾಗರ ಹಾಗೂ ನಾಯಕನಹಟ್ಟಿ, ಸೆ.30ರಂದು ಹೊಳ ಲ್ಕೆರೆ,ಹೊಸದುರ್ಗ ಹಾಗೂ ಚಳ್ಳಕೆರೆ,ಅಕ್ಟೋಬರ್ 1ರಂದು ಹಿರಿಯೂರು,ಅ.8ರಂದು ಚಿತ್ರದುರ್ಗದಲ್ಲಿ ಪತ್ರಿಷ್ಠಾಪಿಸಿರುವ ಹಿಂದು ಮಹಾ ಗಣಪತಿ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಈ ದಿನಾಂಕಗಳಂದು ಬೆಳಗ್ಗೆ 6ರಿಂದ ರಾತ್ರಿ12ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.