More

    ಪುಣೆ, ಕೇರಳ ತಂಡ ಚಾಂಪಿಯನ್

    ಬೋರಗಾಂವ: ನಿಪ್ಪಾಣಿ ಪಟ್ಟಣದ ಮೋಹನಲಾಲ ದೋಶಿ ಮಹಾವಿದ್ಯಾಲಯದ ಮೈದಾನದಲ್ಲಿ ಅರಿಹಂತ ಗ್ರುಪ್‌ನ ಅಭಿನಂದನ ಪಾಟೀಲ ಹಾಗೂ ಯುವ ಮುಖಂಡ ಉತ್ತಮ ಪಾಟೀಲ ಅವರು ಆಯೋಜಿಸಿದ್ದ 3 ದಿನದ ವಾಲಿಬಾಲ್ ಪಂದ್ಯಾವಳಿಯ ೈನಲ್ ಸ್ಪರ್ಧೆಯಲ್ಲಿ ಪುರುಷ ವಿಭಾಗದಲ್ಲಿ ಪುಣೆ ಹಾಗೂ ಮಹಿಳಾ ವಿಭಾಗದಲ್ಲಿ ಕೇರಳ ತಂಡಗಳು ಜಯಗಳಿಸಿದವು. ಪುಣೆ ತಂಡವು 3-1 ಅಂಕ ಪಡೆದು ಅಮರಾವತಿ ಸಂಘದ ವಿರುದ್ಧ ಜಯಗಳಿಸಿತು. ಮಹಿಳಾ ವಿಭಾಗದಲ್ಲಿ ಕೇರಳ ತಂಡವು ಮಹಾರಾಷ್ಟ್ರ ರಾಜ್ಯದ ಭಿಲವಡಿ ತಂಡದ ವಿರುದ್ಧ 3.0 ಅಂಕ ಗಳಿಸಿ ಜಯಸಾಧಿಸಿತು. ನಿರ್ಣಾಯಕರಾಗಿ ರಾಮಾನಂದ ಗೋಸಾವಿ,ದೀಪಕ ಚವ್ಹಾಣ, ಅಮೋಲ ಗೋರೆ ಹಾಗೂ ಮಾರುತಿ ಕಾಶಿದ ಕಾರ್ಯನಿರ್ವಹಿಸಿದರು. ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣಪತ್ರ ಮತ್ತು ಟ್ರೋಫಿ ನೀಡಿ ಗೌರವಿಸಲಾಯಿತು. ಯುವ ಮುಖಂಡ ಉತ್ತಮ ಪಾಟೀಲ ಮಾತನಾಡಿ, ಬಾಲವೀರ ಕ್ಲಬ್ ಹಾಗೂ ಅರಿಹಂತ ಉದ್ಯೋಗ ಸಮೂಹ ವತಿಯಿಂದ ಆಯೋಜಿಸಿದ್ದ ಪಂದ್ಯಾವಳಿಗೆ ಉತ್ತಮ ಪ್ರೋತ್ಸಾಹ ಸಿಕ್ಕಿದೆ. ರಾಷ್ಟ್ರೀಯ ಕ್ರೀಡಾಪಟುಗಳು ಭಾಗವಹಿಸಿ ಪಂದ್ಯಾವಳಿ ಯಶಶ್ವಿಗೊಳಿಸಿದ್ದಾರೆ. ಇನ್ನು ಮುಂದೆ ಪ್ರತಿವರ್ಷ ವಾಲಿಬಾಲ್ ಸ್ಪರ್ಧೆ ಆಯೋಜಿಸಲಾಗುವುದು. ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ಗ್ರಾಮೀಣ ಮಟ್ಟದ ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲಿ ಮಿಂಚಲಿ ಎಂಬುದು ಉದ್ದೇಶವಾಗಿದೆ ಎಂದರು. ಮಹಾರಾಷ್ಟ್ರ ವಾಲಿವಾಲ್ ಸಂಘದ ಅಧ್ಯಕ್ಷ ಪ್ರತೀಕ ಪಾಟೀಲ, ಮಾಜಿ ಶಾಸಕ ಸುಭಾಷ ಜೋಶಿ, ಮೀನಾಕ್ಷಿ ಪಾಟೀಲ, ವಿನಯಶ್ರೀ ಪಾಟೀಲ, ಧನಶ್ರೀ ಪಾಟೀಲ, ರಾಜಕುಮಾರ ಸಾವಂತ, ಪುಷ್ಕರ ತಾರಳೆ, ಬಾಳಾಸಾಹೇಬ ಸೂರ್ಯವಂಶಿ, ನಗರಸಭೆ ಸದಸ್ಯ ಸಂಜಯ ಸಾಂಗಾವಕರ, ಶೌಕತ್ ಮನೇರ, ಶಾಮ ರೇವಡೆ, ಅನಿಲ ಸಂಕಪಾಳ, ಅಜಯ ಮಾನೆ, ದತ್ತಾ ನಾಯಿಕ್, ದೀಪಕ ಸಾವಂತ, ಅನೀಸ್ ಮುಲ್ಲಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts