ಯಲ್ಲಾಪುರ: ಪರೀಕ್ಷೆ ಭಯದಿಂದ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬರಗದ್ದೆ ಸಮೀಪದ ಚಿಟ್ಟಾಮಕ್ಕಿಯಲ್ಲಿ ನಡೆದಿದೆ. ಅಲೋಕಕುಮಾರ ಶ್ರೀನಿವಾಸ ಭಟ್ಟ (16) ಮೃತ ವಿದ್ಯಾರ್ಥಿ. ಯಲ್ಲಾಪುರದಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಈತ ಮುಂಬರುವ ಪರೀಕ್ಷೆಗೆ ಸರಿಯಾಗಿ ಓದಿಕೊಳ್ಳದ ಕಾರಣ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.