ಭದ್ರಾವತಿ: ಉಂಬ್ಳೆಬೈಲು ವಲಯ ಅರಣ್ಯ ವಿಭಾಗ ವ್ಯಾಪ್ತಿಯ ಕಣಗಲಸರ ಗ್ರಾಮದಲ್ಲಿ 2 ಜಿಂಕೆಗಳನ್ನು ಕೊಂದು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಶನಿವಾರ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಬಂಧಿಸಿ ಶಿವಮೊಗ್ಗ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಕಣಗಲಸರ ಗ್ರಾಮ ನಿವಾಸಿಗಳಾದ ದಿನೇಶ್ ಮತ್ತು ರಮೇಶ ಬಂಧಿತು. ಆರೋಪಿಗಳಿಂದ 2 ಜಿಂಕೆ ಚರ್ಮ, ಮಾಂಸ ಹಾಗೂ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಕಣಗಲಸರದ ದಿವಾಕರ, ನಾಗರಾಜ, ಉಂಬ್ಳೆಬೈಲು ನಿವಾಸಿಗಳಾದ ಶಿವಾನಂದ, ದೀಪು ತಲೆಮರೆಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಉಂಬ್ಳೆಬೈಲು ವಲಯ ಅರಣ್ಯಾಧಿಕಾರಿ ಮಂಜುನಾಥ್, ಸಿಬ್ಬಂದಿಗಳಾದ ಉಪವಲಯ ಅರಣ್ಯಾಧಿಕಾರಿ ಅಬ್ದುಲ್ ಕರೀಮ್ ಮುಬಾರಕ್, ಗಿಡ್ಡಸ್ವಾಮಿ, ಸುನಿಲ್ ಪಾಲ್ಗೊಂಡಿದ್ದರು.