More

    ಚನ್ನಶೆಟ್ಟಿ ಪರ ವಿವಿಧೆಡೆ ಪ್ರಚಾರ

    ಬೀದರ್: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಸುರೇಶ ಚನ್ನಶೆಟ್ಟಿ ಪರ ಪರಿಷತ್ ಜಿಲ್ಲಾ ಘಟಕದ ಪದಾಧಿಕಾರಿಗಳು, ಸಾಹಿತಿಗಳು ಹಾಗೂ ಲೇಖಕರು ನಗರದ ವಿವಿಧೆಡೆ ಬಿರುಸಿನ ಪ್ರಚಾರ ನಡೆಸಿದರು.

    ಪ್ರತಾಪನಗರ, ನೌಬಾದ್, ಯಲ್ಲಾಲಿಂಗ ಕಾಲನಿಗಳಲ್ಲಿ ಸದಸ್ಯರ ಮನೆ ಮನೆಗೆ ಭೇಟಿ ನೀಡಿ ಮತ ಯಾಚಿಸಿದರು. ಐದು ವರ್ಷಗಳ ಅವಧಿಯಲ್ಲಿ ಗಡಿ ಜಿಲ್ಲೆಯಲ್ಲಿ ಕನ್ನಡಮಯ ವಾತಾವರಣ ನಿರ್ಮಿಸುವಲ್ಲಿ ಚನ್ನಶೆಟ್ಟಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಕಸ್ತೂರಿ ಪಟಪಳ್ಳಿ ಹೇಳಿದರು.

    ಸಾಹಿತಿ ವಿದ್ಯಾವತಿ ಬಲ್ಲೂರ ಮಾತನಾಡಿ, ಸುರೇಶ ಅವರ ಅವಧಿಯಲ್ಲಿ ಜಿಲ್ಲಾ ಕೇಂದ್ರದಲ್ಲಿ ನೂತನ ಕನ್ನಡ ಭವನ ನಿರ್ಮಾಣ ಶುರುವಾಗಿದೆ. ಭವನವನ್ನು ರಾಜ್ಯದಲ್ಲೇ ಮಾದರಿಯಾಗಿ ನಿರ್ಮಿಸಲು ಅವರಿಗೆ ಮತ್ತೊಂದು ಅವಧಿಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

    ಪ್ರಮುಖರಾದ ಕಲ್ಯಾಣರಾವ್ ಚಳಕಾಪುರೆ, ಡಾ. ರಾಜಕುಮಾರ ಅಲ್ಲೂರೆ, ಟಿ.ಎಂ. ಮಚ್ಚೆ, ಡಾ. ಬಂಡಯ್ಯ ಸ್ವಾಮಿ, ಸುನೀಲ ಬೀದೆ, ಮಹೇಶ ಬಿರಾದಾರ, ಆನಂದ ಪಾಟೀಲ್, ಸುರೇಶ ಗೌರೆ, ಸಂಗಮೇಶ್ವರ ಜ್ಯಾಂತೆ, ಸಿದ್ಧಾರೂಢ ಭಾಲ್ಕೆ, ಸಾಕ್ಷಿ ಬಿರಾದಾರ, ಸಂಗೀತಾ ಶೆಟಕಾರ್, ನಾಗೇಶ ಮಡಿವಾಳ, ಸಂಧ್ಯಾರಾಣಿ ಮುತ್ತಂಗೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts