More

    ಕಾಡಾನೆ ದಾಳಿಗೆ ಅಡಕೆ, ಬಾಳೆ ನಾಶ

    ಮುಂಡಗೋಡ: ತಾಲೂಕಿನ ಕಲಕೊಪ್ಪ ಗ್ರಾಮದ ಅರಣ್ಯದ ಅಂಚಿನಲ್ಲಿರುವ ತೋಟ ಮತ್ತು ಗದ್ದೆಗಳಿಗೆ ಭಾನುವಾರ ಕಾಡಾನೆ ಹಿಂಡು ದಾಳಿ ನಡೆಸಿ ಹಾನಿ ಉಂಟು ಮಾಡಿವೆ.

    ಗ್ರಾಮದ ಪುಟ್ಟಪ್ಪ ಇಂಗಳಕಿ ಎಂಬ ರೈತನ ಬಾಳೆ, ಅಡಕೆ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ಅಪಾರ ಹಾನಿ ಉಂಟು ಮಾಡಿವೆ. ಶಾಂತವ್ವ ದೇವರಗುಡ್ಡ ಎಂಬುವರ ಭತ್ತದ ಬಣವೆಯನ್ನು ನಾಶಪಡಿಸಿವೆ. ಕಳೆದ ಒಂದು ವಾರದಿಂದ ಇದೇ ಭಾಗದ ಶಿಂಗನಳ್ಳಿ, ಪಾಳಾ, ಹುಡೇಲಕೊಪ್ಪ ಮತ್ತು ಅಟ್ಟಣಗಿ ಸಮೀಪದ ಅರಣ್ಯ ಪ್ರದೇಶದಲ್ಲಿ ಎರಡು ದೊಡ್ಡ ಆನೆ ಮತ್ತು ಎರಡು ಮರಿಯಾನೆ ಬೀಡು ಬಿಟ್ಟಿದ್ದು ಅರಣ್ಯದ ಅಂಚಿನಲ್ಲಿರುವ ಗದ್ದೆಗಳಿಗೆ ನುಗ್ಗುತ್ತಿವೆ. ಇದರಿಂದ ಈ ಭಾಗದ ರೈತರು ರೋಸಿ ಹೋಗಿದ್ದಾರೆ. ಅರಣ್ಯ ಇಲಾಖೆಯವರು ಆನೆಗಳನ್ನು ಓಡಿಸಲು ಹರಸಾಹಸ ಪಡುತ್ತಿದ್ದಾರೆ.

    ತಾಲೂಕಿನ ಮೈನಳ್ಳಿ, ಗುಂಜಾವತಿ, ಶಿಂಗನಳ್ಳಿ, ಅಟ್ಟಣಗಿ, ಪಾಳಾ ಹುಡೇಲಕೊಪ್ಪ ಮುಂತಾದ ಅರಣ್ಯ ಪ್ರದೇಶಗಳಲ್ಲಿ ಐದಾರು ಕಾಡಾನೆಗಳು ಅಲೆಯುತ್ತಿವೆ. ನಮ್ಮ ಸಿಬ್ಬಂದಿ ಈಗಾಗಲೇ ಅವುಗಳನ್ನು ಗದ್ದೆಗಳ ಅಂಚಿನಿಂದ ಅರಣ್ಯದತ್ತ ಓಡಿಸುತ್ತಿದ್ದಾರೆ. ಕೆಲ ಕಾಡಾನೆಗಳ ಗುಂಪು ತಮ್ಮ ಮೂಲ ಸ್ಥಾನಕ್ಕೆ ಮರಳುತ್ತಿರುವುದು ಕಂಡು ಬಂದಿದೆ. ಇನ್ನು 15 ದಿನಗಳಲ್ಲಿ ಅವುಗಳೆಲ್ಲವೂ ತಮ್ಮ ಮೂಲ ಸ್ಥಾನಕ್ಕೆ ತೆರಳುತ್ತವೆ. | ಅಜಯ ನಾಯ್ಕ, ಆರ್​ಎಫ್​ಒ ಕಾತೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts