ಸ್ಮಶಾನದಲ್ಲಿ ರುದ್ರ ದೇಗುಲ ಅಭಿವೃದ್ಧಿಗೆ ಕ್ರಮ

blank

ಶಿಕಾರಿಪುರ: ರುದ್ರಭೂಮಿಗಳೆಂದರೆ ಸಾಮಾನ್ಯವಾಗಿ ಜನರಲ್ಲಿ ಭಯದ ವಾತಾವರಣವಿದೆ. ಆದರೆ ಅದು ನಮ್ಮ ಜೀವನದ ವಿದಾಯದ ಸ್ಥಳ. ಇದನ್ನು ಭಯ ಮುಕ್ತವಾಗಿಸಲು ಪಾರ್ಕ್, ರುದ್ರ ದೇವಸ್ಥಾನ ಮುಂತಾದ ಅಭಿವೃದ್ಧಿ ಕಾರ್ಯ ಮಾಡಬೇಕಾದ ಅಗತ್ಯವಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಪಟ್ಟಣದ ಹೊನ್ನಾಳಿ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಪರೋಪಕಾರಂ ತಂಡ ಸ್ವಚ್ಛತಾ ಕಾರ್ಯ ಮಾಡುತ್ತಿದ್ದ ಸಂದರ್ಭದಲ್ಲಿ ಭೇಟಿ ನೀಡಿ ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ ಅವರು, ಈ ರುದ್ರಭೂಮಿಯನ್ನು ಹೊಸದುರ್ಗ ತಾಲೂಕಿನ ಬೇಗೂರು ರುದ್ರಭೂಮಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು.

ರಾಜ್ಯದ ಹಲವೆಡೆ ರುದ್ರಭೂಮಿಗಳಲ್ಲಿ ಮಕ್ಕಳು ಸಹ ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಅಂತಹ ವಾತಾವರಣ ನಮ್ಮಲ್ಲಿರುವ ರುದ್ರ ಭೂಮಿಗಳಲ್ಲೂ ನಿರ್ವಣವಾಗಬೇಕು. ಎಲ್ಲ ಜನಾಂಗದವರ ವಿಧಿ ವಿಧಾನಗಳಂತೆ ಅಂತ್ಯಸಂಸ್ಕಾರ ನಡೆಯಲು ಇಲ್ಲಿ ಪೂರಕ ವ್ಯವಸ್ಥೆಗಳಾಗಬೇಕು. ಶಿವನ ಆಲಯ, ನೀರಿನ ವ್ಯವಸ್ಥೆ, ಸಂಸ್ಕಾರಕ್ಕೆ ಬೇಕಾದ ವಸ್ತುಗಳು ರುದ್ರಭೂಮಿಯಲ್ಲಿಯೇ ದೊರಕುವಂತಾಗಬೇಕು. ಇಲ್ಲಿ ಧಾರ್ವಿುಕ ವಿಧಿವಿಧಾನಗಳನ್ನು ನಡೆಸಲು ಸಂಬಂಧಪಟ್ಟವರಿಗೆ ಅನುಕೂಲವಾಗಬೇಕು ಎಂದರು.

ಪರೋಪಕಾರಂ ತಂಡದ ಕೆ.ಎಸ್.ಹುಚ್ಚುರಾಯಪ್ಪ, ಮಧುಕೇಶ್ವರ್, ಲಕ್ಷ್ಮಣ್ ಸದಸ್ಯರು ಇದ್ದರು.

Share This Article

ರಾತ್ರಿ ವೇಳೆ ಮಾವಿನ ಹಣ್ಣು ತಿನ್ನಬಾರದು! ಯಾಕೆ ಗೊತ್ತಾ? mango

mango: ಬೇಸಿಗೆಯಲ್ಲಿ ಹೆಚ್ಚು ಇಷ್ಟವಾಗುವ ಹಣ್ಣು ಮಾವಿಹಣ್ಣು. ಇದು ವಿಟಮಿನ್ ಎ, ಸಿ, ಫೈಬರ್, ಉತ್ಕರ್ಷಣ…

ಅಕ್ಷಯ ತೃತೀಯ ಹಬ್ಬಕ್ಕೂ ಮುನ್ನ ನಿಮ್ಮ ಮನೆಯಿಂದ ಈ ವಸ್ತುಗಳನ್ನು ತೆಗೆದುಹಾಕಿ..  Akshaya Tritiya

Akshaya Tritiya: ಅಕ್ಷಯ ತೃತೀಯ ಹಬ್ಬವನ್ನು ಲಕ್ಷ್ಮಿ ದೇವಿಯ ಹಬ್ಬವೆಂದು ಪರಿಗಣಿಸಲಾಗುತ್ತದೆ.  ಚಿನ್ನದ ಅಂಗಡಿಗಳು ವ್ಯಾಪಾರದಿಂದ…

ಕಬ್ಬಿನ ರಸವನ್ನು ಎಷ್ಟು ದಿನ ಸಂಗ್ರಹಿಸಬಹುದು..ಈ ಜ್ಯೂಸ್​​ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳಿವು..Sugarcane Juice

  Sugarcane Juice: ಕಬ್ಬಿನ ಜ್ಯೂಸ್​​ ಬೇಸಿಗೆಯಲ್ಲಿ ಎಲ್ಲರೂ ಹೆಚ್ಚು ಇಷ್ಟಪಡುವ ಆರೋಗ್ಯಕರ ಪಾನೀಯಗಳಲ್ಲಿ ಒಂದಾಗಿದೆ.…