ಸ್ತ್ರೀಕುಲಕ್ಕೆ ಅಕ್ಕಮಹಾದೇವಿ ಸ್ಪೂರ್ತಿ

blank

ಭಾಲ್ಕಿ: ಹನ್ನೆರಡನೇ ಶತಮಾನದ ಶರಣೆ ಅಕ್ಕಮಹಾದೇವಿ ಇಂದಿನ ಆಧುನಿಕ ಕಾಲದ ಸ್ತ್ರೀಕುಲಕ್ಕೆ ಸ್ಪೂರ್ತಿಯ ಸೆಲೆ ಮತ್ತು ಹೊಸ ಬೆಳಕು ಎಂದು ಚಿಕ್ಕಮಗಳೂರಿನ ಜಿ.ವಿ.ಮಂಜುನಾಥ ಹೇಳಿದರು.

blank

ಕರಡ್ಯಾಳ ಚನ್ನಬಸವೇಶ್ವರ ಗುರುಕುಲದ ಕದಳಿ ವಸತಿ ವಿಭಾಗದ ಎದುರಿನ ಅಕ್ಕಮಹಾದೇವಿ ವೃತ್ತದಲ್ಲಿ ಶನಿವಾರ ಆಯೋಜಿಸಿದ್ದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಕ್ಕ ಮಹಾದೇವಿ ಸಾಮಾನ್ಯ ಮಹಿಳೆ ಆಗಿರಲಿಲ್ಲ. ಅವರು ಮಹಿಳಾ ಸ್ವಾತಂತ್ರ್ಯಮತ್ತು ಅಭಿವ್ಯಕ್ತಿ ಸಂಸ್ಕೃತಿಯ ಸಂಕೇತ. ಅವರು ತೋರಿದ ದಾರಿಯಲ್ಲಿ ಎಲ್ಲರೂ ಸಾಗಬೇಕು ಎಂದರು.

ಕದಳಿ ವಸತಿ ವಿಭಾಗದ ಮುಖ್ಯಸ್ಥೆ ಪ್ರೇಮಾ, ಇಂದುಮತಿ ತಂಡದವರು ತೊಟ್ಟಿಲು ಕಾರ್ಯಕ್ರಮ ನಡೆಸಿಕೊಟ್ಟರು. ಚನ್ನಬಸವೇಶ್ವರ ಪ್ರೌಢ ಶಾಲೆಯ ಮುಖ್ಯಗುರು ಮಹೇಶ ಮಹಾರಾಜ, ಪ್ರಾಥಮಿಕ ವಿಭಾಗದ ಮುಖ್ಯಗುರು ಮಹೇಶ ಕುಲಕರ್ಣಿ, ದತ್ತು ಕೇಂದ್ರದ ಮುಖ್ಯಸ್ಥ ಅನಿಲಕುಮಾರ ಹಾಲಕೂಡೆ, ದೈಹಿಕ ನಿರ್ದೇಶಕ ಅನಿಲಕುಮಾರ ಪಾಟೀಲ್ ಇತರರಿದ್ದರು.

ವಿದ್ಯಾರ್ಥಿನಿ ಸಾನ್ವಿ ವಿಜಯಕುಮಾರ ವಚನ ಗಾಯನ ನಡೆಸಿಕೊಟ್ಟರು. ಸಿಬಿಎಸ್‌ಇ ವಿದ್ಯಾರ್ಥಿನಿ ಪಿಯುಷಾ ನಿರೂಪಣೆ ಮಾಡಿದರು.

Share This Article
blank

ಬೆಳಿಗ್ಗೆ ಈ ಸೂಪರ್​ ಫುಡ್​ಗಳನ್ನು ಸೇವಿಸಿ: ನಿಮ್ಮ ದೇಹದಲ್ಲಾಗುವ ಸಕಾರಾತ್ಮಕ ಬದಲಾವಣೆ ಗಮನಿಸಿ | Superfoods

Superfoods: ಸಾಮಾನ್ಯವಾಗಿ ಬೆಳಗಿನ ಸಮಯವು ದಿನಪೂರ್ತಿ ಮನಸ್ಥಿತಿಯನ್ನು ನಿರ್ಧರಿಸುತ್ತದೆ. ಎದ್ದ ತಕ್ಷಣ ನೀವು ಏನು ಮಾಡುತ್ತೀರಿ…

ರಸ್ತೆಯಲ್ಲಿ ಬಿದ್ದಿರುವ ಇಂತಹ ವಸ್ತುಗಳನ್ನು ದಾಟಿದ್ರೆ ಕೆಟ್ಟ ಸಮಯ ಆರಂಭವಾಗುತ್ತಂತೆ!: ಏನೀ ವಸ್ತುಗಳು ತಿಳಿಯಿರಿ.. | Vastu

Vastu : ರಸ್ತೆಯಲ್ಲಿ ಹಾಗಾಗ ವಿಚಿತ್ರ ವಸ್ತುಗಳು ಬಿದ್ದಿರುವುದನ್ನು ನಾವು ಗಮನಿಸುತ್ತೇವೆ. ಈ ವಸ್ತುಗಳ ಬಗ್ಗೆ…

blank