ಮೈಸೂರು: ತಿ.ನರಸೀಪುರ ರಸ್ತೆಯ ದುದ್ದಗೆರೆ ಬಳಿ ಸ್ಕೂಟರ್ಗೆ ಕಾರು ಡಿಕ್ಕಿ ಹೊಡೆದು ಪತ್ನಿ ಸಾವಿಗೀಡಾಗಿದ್ದು, ಪತಿ ಗಾಯಗೊಂಡಿದ್ದಾರೆ.

ನಿಮಿಷಾಂಬ ಬಡಾವಣೆ ನಿವಾಸಿ ಯಶೋದಮ್ಮ(45) ಮತರು. ಇವರ ಪತಿ ನಾಗರಾಜ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಾಗರಾಜ್ ಅವರು ಪತ್ನಿಯೊಂದಿಗೆ ಸ್ಕೂಟರ್ನಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ದುದ್ದುಗೆರೆ ಬಳಿ ವೇಗವಾಗಿ ಬಂದ ಕಾರು ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ.
ಇದರಿಂದ ಇಬ್ಬರು ನೆಲಕ್ಕೆ ಬಿದ್ದಿದ್ದಾರೆ. ಕೂಡಲೇ ಸಾರ್ವಜನಿಕರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲಿ ಯಶೋದಮ್ಮ ಅವರು ಮತಪಟ್ಟಿದ್ದರು.
ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.