ಸುಟ್ಟು ಕರಕಲಾದ ಭತ್ತದ ಬೆಳೆ !

blank

ಶಿರಸಿ: ರೈತನೊಬ್ಬ ಕಣ್ತಪ್ಪಿನಿಂದ ಕೀಟನಾಶಕದ ಬದಲು ಕಳೆನಾಶಕ ಸಿಂಪಡಿಸಿದ್ದರಿಂದ ತಾಲೂಕಿನ ಮರಗುಂಡಿಯಲ್ಲಿ ಎರಡೂವರೆ ಎಕರೆ ಭತ್ತದ ಬೆಳೆ ಸುಟ್ಟು ಕರಕಲಾಗಿದ್ದು, ವರ್ಷದ ತುತ್ತಿನ ಚೀಲಕ್ಕೆ ಬರೆ ಬಿದ್ದಂತಾಗಿದೆ.

ತಾಲೂಕಿನ ಹಲಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಗುಂಡಿಯ ದತ್ತು ಉಳ್ಳಪ್ಪ ನಾಯ್ಕ ಎಂಬುವವರು ಕಣ್ತಪ್ಪಿನಿಂದಾಗಿ ಕಳೆನಾಶಕ ಸಿಂಪಡಿಸಿದ ಕಾರಣ ಫಸಲಿಗೆ ಬರುತ್ತಿದ್ದ ಭತ್ತದ ಬೆಳೆ ಕಳೆದುಕೊಂಡಿದ್ದಾರೆ. ಬಡ ಕೃಷಿಕನಾಗಿರುವ ಇವರಿಗೆ ಎರಡೂವರೆ ಎಕರೆ ಗದ್ದೆ ಬಿಟ್ಟರೆ ಬೇರೆನೂ ಇಲ್ಲ. ಇದರಲ್ಲಿಯೇ ವರ್ಷದ ತುತ್ತಿನ ಚೀಲ ತುಂಬುತಿತ್ತು. ಓದು ಬರಹ ಗೊತ್ತಿಲ್ಲದ ಈತ ಔಷಧ ಎಂದು ಕಳೆನಾಶಕ ಸಿಂಪಡಣೆ ಮಾಡಿದ್ದು, ಮಾರನೆ ದಿನದಿಂದಲೇ ಒಣಗಲು ಆರಂಭವಾದ ಭತ್ತದ ಸಸಿ ಇದೀಗ ಸಂಪೂರ್ಣ ಸುಟ್ಟಿದೆ. ಬರಲಿರುವ ದಿನಗಳಲ್ಲಿ ಜೀವನ ನಿರ್ವಹಣೆ ಹೇಗೆ ಮಾಡುವುದೆಂಬ ಚಿಂತೆ ಎದುರಾಗಿದೆ. ತಂದೆ ಅನಾರೋಗ್ಯಕ್ಕೆ ತುತ್ತಾಗಿದ್ದು, ಪತ್ನಿ, ಇಬ್ಬರು ಮಕ್ಕಳನ್ನು ಸಾಕುವುದು ಹೇಗೆ ಎಂದು ರೈತ ದತ್ತು ನಾಯ್ಕ ಕಣ್ಣೀರಿಡುತ್ತಿದ್ದಾರೆ.

Share This Article

ಹೋಟೆಲ್​ ಸ್ಟೈಲ್​​ ಪನೀರ್ ಅಮೃತಸರಿ ಮಾಡುವ ವಿಧಾನ ಇಲ್ಲಿದೆ; ನೀವೊಮ್ಮೆ ಟ್ರೈ ಮಾಡಿ | Recipe

ಹಲವು ಬಾರಿ ಒಂದೇ ರೀತಿಯ ಆಹಾರ ತಿಂದು ಬೇಸರವಾಗುತ್ತದೆ. ಆಗ ಹೋಟೆಲ್‌ಗೆ ಹೋಗಿ ಊಟ ಮಾಡಲು…

ಚಿನ್ನದ ಮೇಲೆ ಲೋನ್​ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳಿಂದ ಮೊದಲು ದೂರವಿರಿ, ಇಲ್ಲದಿದ್ರೆ ನಷ್ಟ ಖಚಿತ | Gold Loan

Gold Loan: ಮನೆಯಲ್ಲಿದ್ದರೆ ಚಿನ್ನ ಚಿಂತೆಯೂ ಏತಕೇ ಇನ್ನಾ? ಎಂಬ ಮಾತನ್ನು ಇಂದಿಗೂ ನಮ್ಮ ಜನ…

ತಣ್ಣೀರಿನಲ್ಲಿ ಈಜುವುದರಿಂದಾಗುವ ಪ್ರಯೋಜನಗಳನ್ನು ನೀವು ತಿಳಿದುಕೊಳ್ಳಲೇಬೇಕು; ನಿಮಗಾಗಿಯೇ ಈ ಮಾಹಿತಿ | Health Tips

ತಣ್ಣೀರಿನಲ್ಲಿ ಈಜುವುದು ಕೇವಲ ಸಾಹಸ ಕ್ರೀಡೆ ಅಥವಾ ಹವ್ಯಾಸವಲ್ಲ. ಆದರೆ ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು…