More

    ಸಕಾಲಕ್ಕೆ ಸಾಲ ಮರುಪಾವತಿಸಿ – ಚಿದಾನಂದ ಸವದಿ

    ಕಾಗವಾಡ: ಸಹಕಾರಿ ಸಂದ ಅಧ್ಯರು, ಆಡಳಿತ ಮಂಡಳಿ ಸದಸ್ಯರು ಸಾಲ ನೀಡುವಾಗ ಭೇದ&ಭಾವ ಮಾಡಬಾರದು. ಎಲ್ಲರಿಗೂ ಸಾಲ ನೀಡಿ, ಅವರ ಆರ್ಥಿಕ ಪ್ರಗತಿಗೆ ಸಹಕರಿಸಬೇಕು ಎಂದು ಬಿಜೆಪಿ ಯುವ ಮುಖಂಡ ಚಿದಾನಂದ ಸವದಿ ಹೇಳಿದ್ದಾರೆ.

    ಪಟ್ಟಣದಲ್ಲಿ ನೂತನವಾಗಿ ಪ್ರಾರಂಭಿಸಲಾದ ಶೇತ್ಕರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಸಂವು ಸದಸ್ಯರಿಗೆ ಪ್ರಥಮ ಹಂತದಲ್ಲಿ 30 ಲ ರೂ. ಸಾಲ ವಿತರಿಸುತ್ತಿರುವುದು ಸಂತಸದ ವಿಚಾರ. ಸದಸ್ಯರು ಸಕಾಲಕ್ಕೆ ಸಾಲ ಮರುಪಾವತಿ ಮಾಡಿ ಸೊಸೈಟಿ ಅಭಿವೃದ್ಧಿಗೆ ಮುಂದಾಗಬೇಕು ಎಂದರು.

    ತಹಸೀಲ್ದಾರ್​ ರಾಜೇಶ ಬುರ್ಲಿ, ಪಿಎಸ್​ಐ ಬಿ.ಎಂ.ರಬಕವಿ, ಸಂದ ಅಧ್ಯ ಶಶಿಕಾಂತ ಜೋಷಿ, ಶಂಕರ ನಂದೇಶ್ವರ, ಹನುಮಂತ ಸಂಕ್ರಟ್ಟಿ, ಸುರೇಶ ಬಕಾರಿ, ಸಂದ ಅಧ್ಯ ಶಶಿಕಾಂತ ಜೋಷಿ, ಉಪಾಧ್ಯ ಚನಗೌಡ ಪಾಟೀಲ, ಸಂಚಾಲಕರಾದ ಶಿವರಾಜ ಪಾಟೀಲ, ರಾಜಗೌಡ ಪಾಟೀಲ, ಶೀತಲ ಕರೋಲೆ, ಶಿವಾಜಿ ಜಾಧವ, ಸುಶೀಲ ಕೋರೆ, ಮಹಾದೇವ ಬಡಿಗೇರ, ಪದ್ಮಶ್ರೀ ಕವಟಗಿ, ಸಾರಿಕಾ ಒಡೆಯರ, ಕೃಷ್ಣಾ ವಡ್ಡರ, ಶಿವಾಜಿ ನಾಯಿಕ, ಮುಖ್ಯ ಕಾರ್ಯದರ್ಶಿ ಸಿದ್ದಗೌಡ ಪಾಟೀಲ, ಜ್ಯೋತಿಕುಮಾರ ಪಾಟೀಲ, ಕಾಕಾಸಾಬ ಪಾಟೀಲ, ರಮೇಶ ಚೌಗುಲಾ, ಶಶಿಕಾಂತ ಜೋಷಿ ಇದ್ದರು.

    ಅರಟಾಳ ವರದಿ: ಗ್ರಾಮೀಣ ಭಾಗದ ರೈತರ ಆರ್ಥಿಕ ಅಭಿವೃದ್ಧಿಯಲ್ಲಿ ಪಿಕೆಪಿಎಸ್​ಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅಥಣಿ ಬಿಜೆಪಿ ಯುವ ನಾಯಕ ಚಿದಾನಂದ ಸವದಿ ಹೇಳಿದ್ದಾರೆ.

    ಸ್ಥಳಿಯ ವಿಶ್ವಕರ್ಮ ಸರ್ಕಲ್​ ಹತ್ತಿರ ಸಹಕಾರಿ ಸಂದ ನೂತನ ಕಟ್ಟಡ ನಿರ್ಮಾಣಕ್ಕೆ ಗುರುವಾರ ಪೂಜೆ ನೆರವೇರಿಸಿ ಮಾತನಾಡಿ, ಗ್ರಾಮಗಳು ಅಭಿವೃದ್ಧಿ ಹೊಂದಿದರೆ ರಾಷ್ಟ್ರ ಅಭಿವೃದ್ಧಿ ಹೊಂದಲು ಸಾಧ್ಯ. ಇಷ್ಟು ದಿನಗಳಿಂದ ಬಾಡಿಗೆ ಕಟ್ಟಡದಲ್ಲಿ ಪ್ರಾರಂಭವಾದ ಸಹಕಾರಿ ಬ್ಯಾಂಕ್​ ಶ್ರೀ ನೂತನ ಕಟ್ಟಡಕ್ಕೆ ಸ್ಥಳಾಂತರವಾಗಲಿದೆ. ಅರಟಾಳ ಗ್ರಾಮದ ಜನರ ಬೇಡಿಕೆಯಾದ ಗ್ರಾಮದ ಮೂರು ಕೆರೆಗಳನ್ನು ತುಂಬುವುದು. ಗ್ರಾಮಸ್ಥರ ಸಹಕಾರದಿಂದ ಶ್ರೀ ಕಾಮಗಾರಿ ಆರಂಭಿಸಲಾಗುವುದು ಎಂದರು.

    ಗ್ರಾಪಂ ಸದಸ್ಯ ರಾಮಪ್ಪ ಪೂಜಾರಿ, ಡಿಸಿಸಿ ಬ್ಯಾಂಕ್​ ನಿವೃತ್ತ ಅಧಿಕಾರಿ ಮೆಂಡಿಗೇರಿ, ಮಹಾಂತೇಶ ಠಕ್ಕನವರ, ಮಲ್ಲಪ್ಪ ಪೂಜಾರಿ, ಕರೇಪ್ಪ ಹಟ್ಟಿ, ಸರಸ್ವತಿ ಕಾಂಬಳೆ, ಶಿವಪ್ಪ ಹಟ್ಟಿ, ರಾಮಪ್ಪ ಪೂಜಾರಿ, ಗಂಗವ್ವ ಅರ್ಜುಣಗಿ, ಡಾ.ವಿಲಾಸ ಜಂಬಗಿ, ಅಪ್ಪಾಸಾಬ ಪಾಟೀಲ, ಶ್ರೀಶೈಲ ಜಂಬಗಿ, ಕೆಂಚಪ್ಪ ಜಂಬಗಿ, ಮಲ್ಲಪ್ಪ ನಾಯಿಕ, ಶ್ರೀಶೈಲ ಸಿಂಧೂರ, ಗೌರವ್ವ ಸನದಿ, ಸುಮಿತ್ರಾ ಹಟ್ಟಿ, ಶಿವಾನಂದ ಖ್ಯಾಡಿ, ರಾಮಪ್ಪ ಬಂಡಾರಿ, ಶ್ರೀಶೈಲ ಪೂಜಾರಿ, ಹನುಮಂತ ಹಟ್ಟಿ, ಶಿವಲಿಂಗಪ್ಪ ಜಂಬಗಿ, ಮುತ್ತಪ್ಪ ಪೂಜಾರಿ, ಹನುಮಂತ ಪೂಜಾರಿ, ಪರಮಾನಂದ ಖ್ಯಾಡಿ ಇತರರು ಇದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts