ಸಂಸತ್ ಸಮಿತಿ ಭೇಟಿ ರಾಜಕೀಯ ಪ್ರೇರಿತ

Priyank Kharge

ಕಲಬುರಗಿ: ರಾಜ್ಯಕ್ಕೆ ಜಂಟಿ ಪಾರ್ಲಿಮೆಂಟ್ ಕಮಿಟಿಯ ಜಗದಾಂಬಿಕಾ ಪಾಲ್ ಭೇಟಿ ನೀಡಿರುವುದು ರಾಜಕೀಯ ಪ್ರೇರಿತ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಂಟಿ ಪಾರ್ಲಿಮೆಂಟ್ ಕಮಿಟಿಯ ಎಲ್ಲ ಸದಸ್ಯರು ಬರಬೇಕಲ್ವಾ? ಬರೀ ಅಧ್ಯP್ಷÀರು ಮಾತ್ರ ಬಂದಿz್ದÁರೆ. ಅವರೊಂದಿಗೆ ಬಿಜೆಪಿ ಮಾಜಿ ಸಂಸದ ಇz್ದÁರೆ. ಅವರೆಲ್ಲ ಕಮಿಟಿಗೆ ಏನು ಸಂಬAಧ? ಎಂದು ಪ್ರಶ್ನಿಸಿದರು. ವಕ್ಫ್ ತೆಗೆಯಬೇಕು ಅಂತ ಬಿಜೆಪಿಯವರು ಹೇಳುತ್ತಾರೆ. ಒಂದೂವರೆ ವರ್ಷದ ಹಿಂದೆ ಬಿಜೆಪಿ ಸರ್ಕಾರವೇ ಇತ್ತು. ಅಂದು ಏನು ಕತ್ತೆ ಕಾಯುವ ಕೆಲಸ ಮಾಡುತ್ತಿದ್ರಾ ಎಂದು ಪ್ರಶ್ನಿಸಿದರು.
ಮುಂಚೆಯಿAದಲೂ ರೈತರಿಗೆ ನೋಟಿಸ್ ಬಂದಿವೆ. ಸಮಿತಿ ಬಂದಿರುವುದು ರಾಜಕೀಯ ಪ್ರೇರಿತ. ಚುನಾವಣೆ ಬಂದಾಗ ಇದನ್ನು ದೊಡ್ಡ ವಿಷಯ ಮಾಡುತ್ತಿz್ದÁರೆ. ವಕ್ಫ್ ಆಸ್ತಿಯನ್ನು ಜಿಐಎಸ್ ಮ್ಯಾಪ್ ಮಾಡಿಸುತ್ತಿರುವುದು ಯಾರು? ಬಿಜೆಪಿಯವರೇ ಮಾಡುತ್ತಿರೋದಲ್ವಾ? ಇದಕ್ಕೆ ಶೋಭಾ ಕರಂದ್ಲಾಜೆ ಏನ್ ಹೇಳ್ತಾರೆ?. ಅಂದು ಏಕೆ ಶೋಭಾ ಪ್ರತಿಭಟಿಸಿಲ್ಲ. ವಕ್ಫ್ ಆಸ್ತಿ ರಕ್ಷಿಸುತ್ತೇವೆ ಎಂದು ಜಿಐಎಸ್ ಮ್ಯಾಪಿಂಗ್‌ಗೆ ೩೩೦ ಕೋಟಿ ರೂ. ಖರ್ಚು ಮಾಡಿದ್ದು, ಬಿಜೆಪಿಯ ಕೇಂದ್ರ ಸರ್ಕಾರ ಅಲ್ವಾ? ಕೇಂದ್ರದಲ್ಲಿ ಬಿಜೆಪಿ ಸರ್ಕಾರ ೧೧ ವರ್ಷ ಆಯಿತು ಏಕೆ ಬ್ಯಾನ್ ಮಾಡಿಲ್ಲ ಎಂದು ಹರಿಹಾಯ್ದರು.
ಮುಖ್ಯಮಂತ್ರಿ ವಿರುದ್ಧ ಲೋಕಾಯುಕ್ತ ತನಿಖೆ ನಡೆಯುತ್ತಿರುವುದನ್ನು ಬಿಜೆಪಿ ವ್ಯಂಗ್ಯ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಲೋಕಾಯುಕ್ತ ಸಂವಿಧಾನಾತ್ಮಕ ಸಂಸ್ಥೆ. ಇವರು ಸಿಬಿಐ ಎನ್ನುತ್ತಿದ್ದಾರೆ. ನಾವು ಅಧಿಕಾರದಲ್ಲಿ ಹಿಂದೆ ಇz್ದÁಗ ಕೇಂದ್ರದಲ್ಲಿಯೂ ಬಿಜೆಪಿ ಸರ್ಕಾರವಿತ್ತು. ಆಗ ನಾವು ಸಿಬಿಐಗೆ ಎಷ್ಟು ಕೇಸು ಕೊಟ್ಟಿz್ದೆವು, ಏನಾಗಿದೆ ? ಸುಮ್ಮನೆ ಸಿಬಿಐ ಅಂದರೆ ಹೇಗೆ. ಡಿಎಸ್‌ಪಿ ಗಣೇಶ ಪ್ರಕರಣ, ಪರೇಶ ಮೇಸ್ತಾ ಪ್ರಕರಣ, ಗಣಿ ಹಗರಣ ಏನಾಯಿತು? ಎಂದ ಅವರು, ಸಿಬಿಐ ಅವರು ನಮಗೆ ಯಾವುದೇ ಕೇಸ್ ಒಪ್ಪಿಸಬೇಡಿ ಎಂದು ಪತ್ರ ಬರೆದಿದ್ದೂ ಇದೆ ಎಂದು ಹೇಳಿದರು.

Share This Article

ಸುಡುವ ಬಿಸಿಲಿನ ಶಾಖದಿಂದ ಮನೆಗೆ ಮರಳುತ್ತಿದ್ದೀರಾ? ಬಂದ ತಕ್ಷಣ ಹೀಗೆ ಮಾಡಬೇಡಿ! Summer Tips

Summer Tips : ಬೇಸಿಗೆಯಲ್ಲಿ, ಹೊರಗಿನ ತಾಪಮಾನವು ತುಂಬಾ ಹೆಚ್ಚಾಗಿರುತ್ತದೆ. ಶಾಖವನ್ನು ತೊಡೆದುಹಾಕಲು  ಹಾಗೂ ಆರೋಗ್ಯವನ್ನು…

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದಾಗುವ ಪ್ರಯೋಜನಗಳು..eating

eating: ನೆಲದ ಮೇಲೆ ಕುಳಿತು ಊಟ ಮಾಡುವುದು ಭಾರತೀಯ ಸಂಸ್ಕೃತಿಯ  ಸಂಪ್ರದಾಯವಾಗಿದೆ. ಆಧುನಿಕ ಕಾಲದಲ್ಲಿ ಊಟದ…

ಕೆಂಪು ಬಾಳೆಹಣ್ಣಿನ ಸೇವನೆಯಿಂದಾಗುವ ಅದ್ಭುತ ಪ್ರಯೋಜಗಳಿವು; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಕೆಂಪು ಬಾಳೆಹಣ್ಣು ಒಂದು ವಿಶಿಷ್ಟ ಮತ್ತು ಪೌಷ್ಟಿಕ ಹಣ್ಣು. ಇದು ಸಾಮಾನ್ಯ ಹಳದಿ ಬಾಳೆಹಣ್ಣಿಗಿಂತ ಹೆಚ್ಚು…