ಗುಂಡ್ಲುಪೇಟೆ: ಪಟ್ಟಣದ ವಿವಿಧ ದೇವಸ್ಥಾನಗಳಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಮುಂಜಾನೆಯಿಂದಲೇ ವಿಶೇಷ ಪೂಜೆಗಳು ನಡೆದವು.
ಶ್ರೀರಾಮೇಶ್ವರ, ವಿಜಯನಾರಾಯಣ ಸ್ವಾಮಿ ಮತ್ತು ತೆರಕಣಾಂಬಿ ಲಕ್ಷ್ಮಿವರದರಾಜಸ್ವಾಮಿ ದೇವಸ್ಥಾನಗಳಿಗೆ ಭಕ್ತರ ದಂಡು ಹರಿಯಿತು.
ಮಕ್ಕಳಿಗೆ ದೇವರ ವೇಷ: ವೈಕುಂಠ ಏಕಾದಶಿ ಅಂಗವಾಗಿ ತೆರಕಣಾಂಬಿಯ ಲಕ್ಷ್ಮೀ ವರದರಾಜಸ್ವಾಮಿ ದೇವಾಲಯದಲ್ಲಿ ಮಕ್ಕಳಿಗೆ ಲಕ್ಷ್ಮಿ ಹಾಗೂ ವಿಷ್ಣು ವೇಷ ಹಾಕಿ ಕೂರಿಸಲಾಗಿತ್ತು.