ವಿಶ್ವದ ಕಲ್ಯಾಣ ಬಯಸುವುದು ಭಾರತ

blank

ಎನ್.ಆರ್.ಪುರ: ಭಾರತ ಕೇವಲ ದೇಶದ ಜನರ ಕಲ್ಯಾಣ ಮಾತ್ರ ಬಯಸುವುದಿಲ್ಲ. ಇಡೀ ವಿಶ್ವದ ಒಳಿತು ಬಯಸುತ್ತದೆ ಎಂದು ವಾಗ್ಮಿ ಪ್ರಕಾಶ ಮಲ್ಪೆ ತಿಳಿಸಿದರು.

ಗುರುವಾರ ಕುದುರೆಗುಂಡಿಯಲ್ಲಿ ಸನಾತನ ಹಿಂದು ಸಮಾಜ ಪರಿಷತ್ ನೇತೃತ್ವದಲ್ಲಿ ನಡೆದ ಹಿಂದು ಸಂಗಮ ಹಾಗೂ ಶ್ರೀಕ್ಷೇತ್ರ ಕಪಿಲ ತೀರ್ಥದ ದೀಪೋತ್ಸವದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಪ್ರಪಂಚದ ಎಲ್ಲ ಕಡೆ ಹಿಂದು ದೇವಾಲಯ, ಹಿಂದು ಸಂಸ್ಕೃತಿ ನೆಲೆಸಿದೆ. ಜರ್ಮನಿಯರು ವೇದಗಳಿಗೆ ಭಾಷ್ಯ ಬರೆದಿದ್ದರು. ಭಾರತಕ್ಕೆ ರಾಜಕೀಯ ಭೀತಿ ಎದುರಾಗಬಹುದು. ಆದರೆ ಸನಾತನ ಧರ್ಮಕ್ಕೆ ಸಣ್ಣ ಚ್ಯುತಿಯೂ ಬರುವುದಿಲ್ಲ. ಹಿಂದು ಧರ್ಮಕ್ಕೆ ಸ್ವಲ್ಪ ಚ್ಯುತಿಯಾದರೂ ವಿಶ್ವವೇ ಭಾರತದ ಬೆಂಬಲಕ್ಕೆ ನಿಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಕೆ.ಪಿ.ಸುರೇಶ್‌ಕುಮಾರ್ ಮಾತನಾಡಿ, 12ನೇ ಶತಮಾನದಿಂದ 17ನೇ ಶತಮಾನದವರೆಗೆ ಅಯೋಧ್ಯೆ, ಕಾಶಿ, ಮಥುರವನ್ನು ಕಳೆದುಕೊಂಡಿದ್ದೆವು. ಧರ್ಮಕ್ಕೆ ಚ್ಯುತಿ ಬಂದಾಗ ಅಧರ್ಮದ ವಿರುದ್ಧ ಹೋರಾಟ ಮಾಡಿ ಧರ್ಮ ಸ್ಥಾಪನೆಗಾಗಿ ಶ್ರೀಕೃಷ್ಣ ಸಹಾಯಕ್ಕೆ ಬರುತ್ತಾನೆ. ಹಿಂದು ಧರ್ಮಕ್ಕೆ ಅನ್ಯಾಯವಾದರೆ ಹೋರಾಟ ಮಾಡಬೇಕು. ಆಗ ನಿಮ್ಮ ಸಹಾಯಕ್ಕೆ ಶ್ರೀಕೃಷ್ಣ ಬರಲಿದ್ದಾನೆ. ಪ್ರತಿ ಹಿಂದು ಮನೆಯಲ್ಲೂ ಒಬ್ಬೊಬ್ಬ ಧರ್ಮ ಸಂರಕ್ಷಕರು ಹುಟ್ಟಿ ಬರಬೇಕು ಎಂದು ಹೇಳಿದರು.
ಸೀತೂರು ಯಕ್ಷಸಿರಿ ರಾಜ್ಯ ಪ್ರಶಸ್ತಿ ಪುರಸ್ಕೃತ ಅನಂತಪದ್ಮನಾಭರಾವ್ ಮಾತನಾಡಿ, ಹಿಂದು ಎಂದರೆ ವಿಶ್ವಕ್ಕೇ ಗುರು ಸ್ಥಾನವಿದ್ದಂತೆ. ಹಿಂದುಗಳು ಸಂಘಟನೆಯಾದರೆ ವಿಶ್ವವನ್ನೇ ಆಳಬಹುದು. ದೇಶದ ಎಲ್ಲ ಮಠಗಳೂ ಒಂದಾಗಬೇಕು ಎಂದರು.
ಕುದುರೆಗುಂಡಿಯಿಂದ ಕಪಿಲಾ ತೀರ್ಥದವರೆಗೆ ಮೆರವಣಿಗೆ, ದೀಪೋತ್ಸವ ನಡೆಯಿತು. ಕಪಿಲೇಶ್ವರ ಸೇವಾ ಸಮಿತಿ ಅಧ್ಯಕ್ಷ ಕೆ.ಕೆ.ಶಿವರಾಜ್, ಹಿಂದು ಕಾರ್ಯಕರ್ತ ಪ್ರಮೋದ್ ಕಾಮತ್, ಚೇತನ್‌ಕುಮಾರ್, ರಂಗಿಣಿ, ಎನ್.ಎಸ್.ವೆಂಕಟರಮಣ, ಕಡೇಗದ್ದೆ ಚಕ್ರಪಾಣಿ, ಅರವಿಂದ ಸೋಮಾಯಾಜಿ, ಜನಾರ್ದನ ಇದ್ದರು.

Share This Article

ಕೇವಲ 10 ನಿಮಿಷದಲ್ಲಿ ಮನೆಯಲ್ಲೇ ಮಾಡಿ ಬ್ರೆಡ್ ಪಿಜ್ಜಾ; ಇಲ್ಲಿದೆ ಸಿಂಪಲ್​ ವಿಧಾನ | Recipe

ಮನೆಯಲ್ಲಿದ್ದಾಗ ಕೆಲವೊಮ್ಮೆ ಬಹಳ ಹಸಿವಾಗುತ್ತಿರುತ್ತದೆ ಆದರೆ ಆ ಸಮಯದಲ್ಲಿ ಏನು ತಿನ್ನಬೇಕು ಎಂಬುದೆ ನಮಗೆ ತಿಳಿಯುವುದಿಲ್ಲ.…

ಊಟದ ಬಳಿಕ ಬೆಲ್ಲದ ಸೇವನೆಯಿಂದಾಗುವ ಪ್ರಯೋಜನ ಗೊತ್ತಾ?; ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ | Health Tips

ಭಾರತದಲ್ಲಿ ಬೆಲ್ಲವನ್ನು ಸಾಮಾನ್ಯವಾಗಿ ಊಟದ ನಂತರ ತಿನ್ನಲಾಗುತ್ತದೆ. ನಿಮ್ಮ ಹಸಿವನ್ನು ನೀಗಿಸಲು ಇದನ್ನು ಸಿಹಿಯಾಗಿ ಸೇವಿಸಬಹುದು.…

ಟೊಮೆಟೊ ಸೇವನೆ ಕ್ಯಾನ್ಸರ್​ ಅಪಾಯವನ್ನು ಕಡಿಮೆ ಮಾಡುತ್ತದೆಯೇ; ಈ ಬಗ್ಗೆ ತಜ್ಞರು ಹೇಳೋದೇನು? | Health Tips

ಕ್ಯಾನ್ಸರ್ ಚಿಕಿತ್ಸೆಯು ಇನ್ನೂ ಅತ್ಯಂತ ದುಬಾರಿ ಮತ್ತು ಅಸಾಧ್ಯವಾಗಿದೆ. ಇತ್ತೀಚೆಗೆ ಯುವಕರನ್ನೂ ಕಾಡುತ್ತಿರುವ ರೋಗ ಕ್ಯಾನ್ಸರ್​​.…