ರೈತ ಉತ್ಪಾದಕ ಸಂಸ್ಥೆಯಿಂದ ಪರಿಹಾರ

blank

ಕುರುಗೋಡು: ಕಳಪೆ ಬಿತ್ತನೆ ಬೀಜ ವಿತರಣೆ ಮಾಡಿದ್ದ ಕೋಳೂರಿನ ರೈತ ಉತ್ಪಾದಕ ಸಂಸ್ಥೆ ಮಂಗಳವಾರ ರೈತರಿಗೆ ಪರಿಹಾರ ನೀಡಲಾಯಿತು.

blank

ರೈತ ಉತ್ಪಾದಕ ಸಂಸ್ಥೆ ಆಂಧ್ರ ಪ್ರದೇಶ ಮೂಲದ ಕಂಪನಿಯಿಂದ ಕೆಂಪು ತೊಗರಿ ಖರೀದಿಸಿ ತಾಲೂಕಿನ ವಿವಿಧ ಗ್ರಾಮದ ರೈತರಿಗೆ ಬಿತ್ತನೆಗೆ ನೀಡಿತ್ತು. ಕಳಪೆ ಬಿತ್ತನೆ ಬೀಜದ ಪರಿಣಾಮ ಬೆಳೆ ಕಾಳು ಕಟ್ಟದೆ ರೈತರಿಗೆ ನಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ರೈತರು ತಹಸೀಲ್ದಾರ್ ನರಸಪ್ಪ ಮೊರೆ ಹೋಗಿದ್ದರಿಂದ ಪರಿಹಾರ ನೀಡುವಂತೆ ರೈತ ಉತ್ಪಾದಕ ಕಂಪನಿಗೆ ತಹಸೀಲ್ದಾರ್ ಸೂಚಿಸಿದ್ದರು. ಪ್ರತಿ ಪಾಕೆಟ್‌ಗೆ ತಲಾ 1500 ರೂ. ನೀಡಲಾಗಿದೆ ಎಂದು ಸಂಸ್ಥೆ ನಿರ್ದೇಶಕ ವಿಜಯ್ ಕುಮಾರ್ ತಿಳಿಸಿದ್ದಾರೆ.

ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಅಧ್ಯಕ್ಷ ಆದಿನಾರಾಯಣ ರೆಡ್ಡಿ, ಉಪಾಧ್ಯಕ್ಷ ಹೇಮರೆಡ್ಡಿ, ಸದಸ್ಯರಾದ ವೆಂಕಟರೆಡ್ಡಿ, ಆಗಲೂರು ಎರ‌್ರಿಸ್ವಾಮಿ, ಹನುಮಂತ, ಪಾಲಾಕ್ಷಿ, ದಮ್ಮೂರು ಶಂಕ್ರಪ್ಪ ಇದ್ದರು.

Share This Article
blank

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

blank