ಚಾಮರಾಜನಗರ: ಜಮೀನಿನಲ್ಲಿ ಹಸು ಮೇಯಿಸಲು ಬಿಟ್ಟಿದ್ದ ವಿಚಾರಕ್ಕೆ ಮೂವರು ಮಹಿಳೆಯರು ಹಲ್ಲೆ ಮಾಡಿದ ಪರಿಣಾಮ ವೃದ್ಧ ಮೃತಪಟ್ಟಿದ್ದಾನೆ.

ತಾಲೂಕಿನ ಕೋಡಿಉಗನೆ ಗ್ರಾಮದ ಚನ್ನಬಸವಯ್ಯ (85) ಮೃತಪಟ್ಟವರು. ಈತನ ಜೀಮಿನಿನಲ್ಲಿ ಏ.23 ರಂದು ನಾಗರತ್ನಮ್ಮ ಎಂಬುವವರು ಹಸುಗಳನ್ನು ಮೇಯಲು ಬಿಟ್ಟಿದ್ದರು. ಈ ವೇಳೆ ವೃದ್ಧ ಚನ್ನಬಸವಯ್ಯ ಅವರು ಹಸುವನ್ನು ಮೇಯಿಸಲು ಬಿಟ್ಟಿರುವುದನ್ನು ಪ್ರಶ್ನಿಸಿದ್ದರು. ಆಗ ನಾಗರತ್ನಮ್ಮ ಅವರೊಂದಿಗೆ ಸುಹಾಸಿನಿ ಮತ್ತು ರೋಹಿನಿ ಎಂಬುವವರು ವೃದ್ಧನ ಕೋಲನ್ನು ಕಿತ್ತುಕೊಂಡು ಹಲ್ಲೆ ಮಾಡಿದ್ದರು. ವೃದ್ಧ ಚನ್ನಬಸವಯ್ಯ ಅವರನ್ನು ಸಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಲಕಾರಿಯಾಗದೇ ಏ.26 ರಂದು ಮೃತಪಟ್ಟಿದ್ದಾರೆ.
ಈ ಸಂಬಂಧ ನಾಗರತ್ನಮ್ಮ, ಸುಹಾಸಿನಿ, ರೋಹಿನಿ ಹಾಗೂ ಅವರ ಸಂಬಂಧಿಕರಾದ ಜಯಪ್ರಕಾಶ್ ಅವರ ವಿರುದ್ಧ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸಿಮ್ಸ್ ಆಸ್ಪತ್ರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಅವರು ಭೇಟಿ ನೀಡಿ ಪರಿಶೀನೆಯನ್ನು ನಡೆಸಿದರು.
ಕೋಡಿಉಗನೆ ಗ್ರಾಮದ ಚನ್ನಬಸವಯ್ಯ ಅವರ ಮೇಲೆ ಮೂವರು ಮಹಿಳೆಯರು ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಲಾಗಿತ್ತು. ಅವರು ಸಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಮೃತಪಟ್ಟಿದ್ದಾರೆ. ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ.
ಡಾ.ಬಿ.ಟಿ.ಕವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಾಮರಾಜನಗರ