ಮೀನುಗಾರರ ಸಮಸ್ಯೆಗಳಿಗೆ ಸ್ಪಂದಿಸಲು ವ್ಯಾಪಾರಸ್ಥರ ಆಗ್ರಹ

blank

ಚಿಕ್ಕಮಗಳೂರು: ಸಂತೆ ಮೈದಾನದಲ್ಲಿ ಮೀನು ವ್ಯಾಪಾರ ನಡೆಸುತ್ತಿರುವ ಮೀನುಗಾರರಿಗೆ ಮಳಿಗೆ ಸೇರಿದಂತೆ ಶುಚಿತ್ವಕ್ಕೆ ಆದ್ಯತೆ ಕೊಡಲು ಹೆಚ್ಚಿನ ಸವಲತ್ತು ಒದಗಿಸಬೇಕು ಎಂದು ಆಗ್ರಹಿಸಿ ಮೀನು ಮಾರಾಟಗಾರರು ನಗರ ವ್ಯಾಪ್ತಿಯಲ್ಲಿನ ಮಳಿಗೆಗಳನ್ನು ಬುಧವಾರ ಬಂದ್‌ಗೊಳಿಸಿ ಸೌಲಭ್ಯಕ್ಕೆ ಒತ್ತಾಯಿಸಿದರು.

ಅಂಬೇಡ್ಕರ್ ರಸ್ತೆ ಸಮೀಪವಿರುವ ಮಟನ್ ಹಾಗೂ ಚಿಕನ್ ಮಳಿಗೆಗಳ ಮಾದರಿಯಂತೆ ಮೀನುಗಾರರಿಗೆ ನಗರಸಭಾ ಆಡಳಿತ ಮಂಡಳಿ ಪ್ರತ್ಯೇಕವಾಗಿ ಮಳಿಗೆ ನಿರ್ಮಿಸಿಕೊಟ್ಟು ಸುಗಮ ವ್ಯಾಪಾರ ಹಾಗೂ ಶುಚಿತ್ವದಿಂದ ಕೂಡಿರಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮೀನು ವ್ಯಾಪಾರಿ ಗೋಪಿ ಮಾತನಾಡಿ, ಸಂತೆದಿನವಾದ ಬುಧವಾರ ಬಹುತೇಕ ಮೀನುಗಾರರು ಸಂತೆ ಮೈದಾನದಲ್ಲಿ ವ್ಯಾಪಾರ ನಡೆಸುತ್ತಾರೆ. ಆದರೆ ಮೀನಿನ ಶುಚಿತ್ವದ ನೀರು ಹರಿಯಲು ಯುಜಿಡಿ ವ್ಯವಸ್ಥೆಯಿಲ್ಲದ ಕಾರಣ ನೇರವಾಗಿ ಚರಂಡಿ ಮೂಲಕ ಹರಿದು ಸ್ಥಳೀಯ ನಿವಾಸಿಗಳ ಮನೆ ಮುಂಭಾಗದ ಚರಂಡಿಯಿAದ ಕಾಲುವೆಗೆ ಸೇರುತ್ತಿದೆ ಎಂದರು.
ಮೀನಿನ ಶುಚಿತ್ವಗೊಳಿಸಿದ ನೀರು ವಿಪರೀತ ವಾಸನೆ ಹಾಗೂ ರೋಗರುಜಿನಿಗಳಿಗೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ಆಕ್ಷೇಪಿಸಿದ ಹಿನ್ನೆಲೆ ಸಂತೆ ಮೈದಾನದಲ್ಲಿ ವ್ಯಾಪಾರ ಸ್ಥಗಿತಗೊಳಿಸಲಾಗಿದೆ. ಈ ಸಂಬAಧ ಶಾಸಕರು ಹಾಗೂ ನಗರಸಭೆ ಆಯುಕ್ತರ ಗಮನಕ್ಕೆ ತಂದಿದ್ದು ಮೀನು ವ್ಯಾಪಾರಕ್ಕೆ ಅನುಕೂಲವಾಗಲು ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.
ಬಹುತೇಕ ಬಡವರ್ಗದ ಜನತೆ ಮೀನು ಮಾರಾಟದ ವೃತ್ತಿಯಲ್ಲಿ ಅನೇಕ ವರ್ಷಗಳಿಂದ ತೊಡಗಿದ್ದಾರೆ. ಇದೀಗ ಸಾರ್ವಜನಿಕ ಆಕ್ಷೇಪದ ಕಾರಣ ವ್ಯಾಪಾರ ನಡೆಸುತ್ತಿಲ್ಲ. ಸಂತೆದಿನ ಹೊರತಾಗಿ ಮಾರ್ಕೆಟ್ ಸಮೀಪ ಬಾಡಿಗೆ ಮಳಿಗೆಗಳಲ್ಲಿ ವ್ಯಾಪಾರ ನಡೆಸಲಾಗುತ್ತಿದೆ. ಈ ಹಿಂದೆ ಮಟನ್ ಹಾಗೂ ಚಿಕನ್ ಮಳಿಗೆಗಳಲ್ಲಿ ಮೀನು ವ್ಯಾಪಾರಕ್ಕೆ ಅವಕಾಶ ಕಲ್ಪಿಸುವುದಾಗಿ ಹೇಳಿ ಹಿಂಜರಿಯಲಾಗಿದೆ ಎಂದು ಹೇಳಿದರು.
ಸಾರ್ವಜನಿಕರು ಹಾಗೂ ಮೀನುಗಾರರ ನಡುವಿನ ಸಮಸ್ಯೆ ಬಗ್ಗೆ ಜನಪ್ರತಿನಿಧಿಗಳು ಹಾಗೂ ನಗರ ಸಭಾವು ಮುತುವರ್ಜಿವಹಿಸಿ ಒಳಚರಂಡಿ ಹಾಗೂ ಮೂಲಸವಲತ್ತು ಒದಗಿಸುವ ಬಗ್ಗೆ ಭರವಸೆ ನೀಡಿದ ಮೇರೆಗೆ ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ಇಂದು ಮೀನು ವ್ಯಾಪಾರವನ್ನು ಸ್ಥಗಿತಗೊಳಿಸಲಾಗಿದ್ದು ಶೀಘ್ರ ವೇ ಮೀನುಗಾರರ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದರು.
ಈ ಸಂದರ್ಭದಲ್ಲಿ ಮೀನುಗಾರರಾದ ಇಬ್ರಾಹಿಂ, ರವಿ, ರಮೇಶ್, ದೀಪು, ಕೃಷ್ಣ, ಜಯರಾಮ್, ಉದಯ್, ಗಣೇಶ್, ಮಂಜುನಾಥ್, ಪ್ರಕಾಶ್, ಹರ್ಷದ್, ಉಬೇದುಲ್ಲಾ, ಕುಮಾರ್, ಮಂಜುನಾಥ್, ಪ್ರಕಾಶ್, ವೆಂಕಟೇಶ್, ಸತೀಶ್ ಮತ್ತಿತರರು ಹಾಜರಿದ್ದರು.

Share This Article

ಬೆಣ್ಣೆಯಂತೆ ಕೊಬ್ಬು ಕರಗಬೇಕೆ; ಉತ್ತಮ ಫಲಿತಾಂಶಕ್ಕಾಗಿ ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ | Health Tips

ಕೆಲವರು ಹೊರಗೆ ಊಟ ಮಾಡಿದ ನಂತರವೂ ತೆಳ್ಳಗಿರುತ್ತಾರೆ. ಯಾವುದೇ ಜಿಮ್ ಅಥವಾ ವ್ಯಾಯಾಮವನ್ನೂ ಮಾಡುವುದಿಲ್ಲ. ಏಕೆಂದರೆ…

ಶೀತ & ಜ್ವರವಿದ್ದಾಗ ಹುಳಿ ಮೊಸರು ಸೇವಿಸಬಹುದೇ?; ಇಲ್ಲಿದೆ ಉಪಯುಕ್ತ ಮಾಹಿತಿ | Health Tips

ಶೀತ ಮತ್ತು ಜ್ವರದ ಚಿಕಿತ್ಸೆಯ ಜತೆಗೆ ಹಲವು ರೀತಿಯ ಮುನ್ನೆಚ್ಚರಿಕೆಗಳನ್ನು ಸಹ ತೆಗೆದುಕೊಳ್ಳಬೇಕಾಗುತ್ತದೆ. ಮೊಸರು ಸೇವಿಸದಿರುವುದು…

ವೇಜ್​, ನಾನ್​ವೆಜ್ ಖಾದ್ಯ​ ‘ಟೊಮ್ಯಾಟೋ’ ಇಲ್ಲದೆ ಆಗೋದೆ ಇಲ್ವಾ? ಹೆಚ್ಚು Tomato ತಿನ್ನುವ ನಿಮಗಾಗಿ ಈ ಸುದ್ದಿ!

Tomato :  ನಾವು ನಮ್ಮ ದೈನಂದಿನ ಅಡುಗೆಗಳಲ್ಲಿ ಟೊಮ್ಯಾಟೋವನ್ನು ಬಳಸುತ್ತೇವೆ. ಟೊಮ್ಯಾಟೋಗಳನ್ನು  ಕರಿ, ಗ್ರೇವಿ, ಸೂಪ್…