ಮಾನವನ ಶ್ರೇಷ್ಠ ಬದುಕಿಗೆ ವಚನಗಳು ದಾರಿದೀಪ

hnd 19-1

ಹುನಗುಂದ: ಹನ್ನೆರಡನೇ ಶತಮಾನದ ಬಸವಾದ ಶರಣರ ವಚನಗಳು ಮಾನವನ ಶ್ರೇಷ್ಠ ಬದುಕಿಗೆ ದಾರಿದೀಪವಾಗಿವೆ ಎಂದು ಶೇಗುಣಸಿಯ ಡಾ. ಮಹಾಂತ ಪ್ರಭುಸ್ವಾಮಿಗಳು ಹೇಳಿದರು.

ಪಟ್ಟಣದ ಪುರಸಭೆ ಮಂಗಲಭವನ ತಾಲೂಕು ಶರಣ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಶರಣ ದಂಪತಿ ಲಿಂ. ಚೆನ್ನಮ್ಮ ಲಿಂ. ನೀಲಕಂಠಪ್ಪ ಹಾದಿಮನಿ ಅವರ 8ನೇ ಪುಣ್ಯಸ್ಮರಣೆ, ದತ್ತಿ ಉಪನ್ಯಾಸ, ಆದರ್ಶ ಶಿಕ್ಷಕ ಪ್ರಶಸ್ತಿ ಹಾಗೂ 29ನೇ ಮನೆ ಮನಗಳಿಗೆ ವಚನ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಸವಾದಿ ಶರಣರ ವಚನಗಳ ಸಂದೇಶ ಕೊನೆಯಲ್ಲಿ ಕಾಣುತ್ತೇವೆ. ಶರಣರು ಬರೆದ ವಚನಗಳಲ್ಲಿ ಬದುಕಿನ ಮೌಲ್ಯಗಳನ್ನು ಕಾಣುತ್ತೇವೆ ಎಂದು ತಿಳಿಸಿದರು

ಚೆನ್ನ ನೀಲಕಂಠ ಪ್ರಕಾಶನದಿಂದ ಪ್ರೊ.ಎಸ್.ಎಸ್. ಮುಡಪಲದಿನ್ನಿ ಬರೆದ ‘ಮಾರ್ಗಮಧ್ಯೆ’ ವಿಮರ್ಶಾ ಕೃತಿ ಹಾಗೂ ಡಾ.ಎಂ.ಬಿ. ಒಂಟಿ ಅವರ ‘ರಂಗಸಿರಿ’ ಎಂಬ ಎರಡು ಕೃತಿಗಳನ್ನು ಪೂಜ್ಯರು ಲೋಕಾರ್ಪಣೆಗೊಳಿಸಿದರು.

ಈ ವರ್ಷದ ಆದರ್ಶ ಶಿಕ್ಷಕ ಪ್ರಶಸ್ತಿಯನ್ನು ಚಿಕ್ಕಮಾಗಿಯ ಸರ್ಕಾರಿ ಶಾಲೆಯ ಶಶಿಧರ ಹಳ್ಳೂರ, ಗಡಿಸುಂಕಾುರ ಸರ್ಕಾರಿ ಶಾಲೆಯ ಸುವರ್ಣ ಬಡಿಗೇರ ಇವರಿಬ್ಬರು ಪ್ರಶಸ್ತಿಗೆ ಭಾಜನರಾದರು.

ಶಿಕ್ಷಕ ಎಸ್.ಕೆ. ಕೊನೆಸಾಗರ ಕೃತಿ ಪರಿಚಯಿಸಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎ.ಎಸ್. ಪಾವಟೆ ಅಧ್ಯಕ್ಷತೆ ವಹಿಸಿದ್ದರು.
ಚಿತ್ತರಗಿ ಸಂಸ್ಥಾನಮಠದ ಗುರು ಮಹಾಂತಸ್ವಾಮಿಗಳು, ಕದಳಿ ಮಹಿಳಾ ವೇದಿಕೆ ಅಧ್ಯಕ್ಷ ಡಾ. ಶಿವಗಂಗಾ ರಂಜಣಗಿ, ತಾಲೂಕು ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಭು ಮಾಲಗಿತ್ತಿಮಠ, ದತ್ತಿದಾನಿ ಡಾ.ಎಸ್.ಎನ್. ಹಾದಿಮನಿ ಇತರರಿದ್ದರು.
ವಿಜಯಮಹಾಂತೇಶ ಪ್ರೌಢಶಾಲೆ ವಿದ್ಯಾರ್ಥಿನಿಯರಿಂದ ವಚನ ಪ್ರಾರ್ಥನೆ ಮಾಡಿದರು.

ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಎಸ್.ಎನ್. ಹಾದಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಿಷತ್ ಕಾರ್ಯದರ್ಶಿ ಸಂಗಮೇಶ ಹೊದ್ಲೂರ ನಿರೂಪಿಸಿದರು.

Share This Article

ಹೋಟೆಲ್​ ಸ್ಟೈಲ್​​ ಪನೀರ್ ಅಮೃತಸರಿ ಮಾಡುವ ವಿಧಾನ ಇಲ್ಲಿದೆ; ನೀವೊಮ್ಮೆ ಟ್ರೈ ಮಾಡಿ | Recipe

ಹಲವು ಬಾರಿ ಒಂದೇ ರೀತಿಯ ಆಹಾರ ತಿಂದು ಬೇಸರವಾಗುತ್ತದೆ. ಆಗ ಹೋಟೆಲ್‌ಗೆ ಹೋಗಿ ಊಟ ಮಾಡಲು…

ಚಿನ್ನದ ಮೇಲೆ ಲೋನ್​ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳಿಂದ ಮೊದಲು ದೂರವಿರಿ, ಇಲ್ಲದಿದ್ರೆ ನಷ್ಟ ಖಚಿತ | Gold Loan

Gold Loan: ಮನೆಯಲ್ಲಿದ್ದರೆ ಚಿನ್ನ ಚಿಂತೆಯೂ ಏತಕೇ ಇನ್ನಾ? ಎಂಬ ಮಾತನ್ನು ಇಂದಿಗೂ ನಮ್ಮ ಜನ…

ತಣ್ಣೀರಿನಲ್ಲಿ ಈಜುವುದರಿಂದಾಗುವ ಪ್ರಯೋಜನಗಳನ್ನು ನೀವು ತಿಳಿದುಕೊಳ್ಳಲೇಬೇಕು; ನಿಮಗಾಗಿಯೇ ಈ ಮಾಹಿತಿ | Health Tips

ತಣ್ಣೀರಿನಲ್ಲಿ ಈಜುವುದು ಕೇವಲ ಸಾಹಸ ಕ್ರೀಡೆ ಅಥವಾ ಹವ್ಯಾಸವಲ್ಲ. ಆದರೆ ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು…