ಭಕ್ತಿ, ಶಾಂತಿ ಮಾರ್ಗದಲ್ಲಿ ಪ್ರತಿಯೊಬ್ಬರೂ ಮುನ್ನಡೆಯಿರಿ

blank

ಆಲೂರು: ಯಾವುದೇ ಕ್ಷೇತ್ರದಲ್ಲಿನ ಮಹಾತ್ಮರು ತಾವು ಮಾಡಿದ ಸಾಧನೆಯಿಂದ ದೇಶ, ಕಾಲವನ್ನು ಮೀರಿ ಸಮಾನ ಗೌರವ ಪಡೆದುಕೊಳ್ಳುತ್ತಾರೆ ಎಂದು ತುಮಕೂರು ಸಿದ್ಧಗಂಗಾ ಮಠದ ಕಿರಿಯ ಶ್ರೀಗಳಾದ ಶಿವಸಿದ್ದೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

blank

ತಾಲೂಕಿನ ಪಾಳ್ಯ ಹೋಬಳಿ ಸಂಕಲಾಪುರ ಮಠದ ಪೀಠಾಧ್ಯಕ್ಷರಾದ ಶ್ರೀ ಧರ್ಮರಾಜೇಂದ್ರ ಸ್ವಾಮೀಜಿ ಅವರ 75ನೇ ವರ್ಷದ ಜನ್ಮದಿನ ಅಮೃತ ಮಹೋತ್ಸವ ಹಾಗೂ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಶ್ರೀ ಜಗದ್ಗುರು ರೇಣುಕಾಚಾರ್ಯರು, ಜಗಜ್ಯೋತಿ ಬಸವೇಶ್ವರ, ಸಿದ್ಧಗಂಗೆಯ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಜಗತ್ತಿಗೆ ನೀಡಿದ ತತ್ವ-ಸಂದೇಶಗಳು ಒಂದೇ ಆಗಿವೆ. ಸಮಾಜದ ಶ್ರೇಯೋಭಿವೃದ್ಧಿ, ಧಾರ್ಮಿಕ ಜಾಗೃತಿ, ಸಾಮಾಜಿಕ ಕ್ರಾಂತಿಯನ್ನು ಇರಿಸಿಕೊಂಡು ಸಾಧನೆ ಮಾಡಿದ ಮಹಾನ್ ವ್ಯಕ್ತಿಗಳು ತಮ್ಮ ಸಾಧನೆಯ ಕಾರಣಕ್ಕೆ ಸಮಾನ ಗೌರವಕ್ಕೆ ಪಾತ್ರರಾಗುತ್ತಾರೆ ಎಂದರು.

ಸಂಕಲಾಪುರ ಮಠದ ಶ್ರೀ ಧರ್ಮರಾಜೇಂದ್ರ ಸ್ವಾಮೀಜಿ ಅವರ ಸೇವಾ ಕೈಂಕರ್ಯ ಶ್ಲಾಘಿಸಿದ ಅವರು, ಸಮಾಜದಲ್ಲಿ ಭಕ್ತಿ ಹಾಗೂ ಶಾಂತಿ ಮಾರ್ಗದಲ್ಲಿ ಪ್ರತಿಯೊಬ್ಬರೂ ಮುನ್ನಡೆಯಬೇಕು. ನಮ್ಮ ದೇಶ ಆಧ್ಯಾತ್ಮಿಕ ಶ್ರೀಮಂತಿಕೆ ಮತ್ತು ಉನ್ನತ ಸಂಸ್ಕೃತಿ ಹೊಂದಿದ ರಾಷ್ಟ್ರ. ಸರ್ವ ಧರ್ಮಗಳ ಸಂಗಮ. ಇಲ್ಲಿ ಎಲ್ಲರೂ ಏಕತೆ, ಸಹೋದರತೆಯಿಂದ ವಿಶ್ವ ಶಾಂತಿಯತ್ತ ಮುನ್ನಡೆಯಬೇಕು ಎಂದು ಹೇಳಿದರು.

ಹಿರೇಮಠ ಕಾರ್ಜುವಳ್ಳಿಯ ಪೀಠಾಧ್ಯಕ್ಷರಾದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜಗದ್ಗುರು ರೇಣುಕರಿಂದ ಸ್ಥಾಪಿಸಲ್ಪಟ್ಟ ವೀರಶೈವ ಧರ್ಮವು ಮಾನವ ಧರ್ಮಕ್ಕೆ ಜಯ ಮತ್ತು ವಿಶ್ವಕ್ಕೆ ಶಾಂತಿ ಬಯಸುವ ಆಶಯ ಹೊಂದಿದೆ. ವೀರಶೈವ ಧರ್ಮದ ಪಂಚಾಚಾರ್ಯರು ಯುಗ ಪುರುಷರು. ಇವರು ತತ್ರೋಪದೇಶ ಬೋಧಿಸಿದರೆ, ಶರಣರು ಶತಮಾನ ಪುರುಷರು. ಈ ಇಬ್ಬರ ಧ್ಯೇಯೋದ್ದೇಶಗಳು ಸಮಾಜದಲ್ಲಿ ಸಮಾನತೆ, ಶಾಂತಿ ಮತ್ತು ಸಮೃದ್ಧಿ ತರುವುದಾಗಿದೆ. ಇಂದು ಜನರು ಆಧುನಿಕತೆಗೆ ಮಾರುಹೋದ ಹಿನ್ನೆಲೆಯಲ್ಲಿ ಅಶಾಂತಿ, ಅತೃಪ್ತಿ ತಾಂಡವವಾಡುತ್ತಿದೆ. ಈ ಅಶಾಂತಿ ತೊಲಗಿ ನೆಮ್ಮದಿಯ ಬದುಕು ಬೇಕಾದರೆ ಎಲ್ಲರಲ್ಲೂ ಮಾನವ ಧರ್ಮಕ್ಕೆ ಜಯವಾಗಲಿ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎನ್ನುವ ಧೈಯ ವಾಕ್ಯ ಮೈಗೂಡಬೇಕಾಗಿದೆ ಎಂದರು.

ದೇವರಾಜು ಅರಸು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ಡಿ.ಕಾಂತರಾಜು ಮಾತನಾಡಿ, ಸಂಕಲಾಪುರ ಶಾಲೆಯಲ್ಲಿಯೇ ಓದಿದ ನಾನು ಇಂದು ಉನ್ನತ ಅಧಿಕಾರಿಯಾಗಲು ಸಾಧ್ಯವಾಯಿತು. ಶ್ರೀಮಠದ ಪೂಜ್ಯರು ನಮಗೆ ನೀಡಿದ ಸಲಹೆ, ಮಾರ್ಗದರ್ಶನವನ್ನು ಎಂದಿಗೂ ಮರೆಯಲಾಗದು. ಅವರ ಆದರ್ಶಗಳು ನಮ್ಮೆಲ್ಲರಿಗೂ ದಾರಿದೀಪ ಎಂದರು.

ಸಾಹಿತಿ ಹಾಗೂ ಶಿಕ್ಷಕ ಎಂ.ಜಿ.ಪರಮೇಶ್ ಮಡಬಲು ಅವರು ಶ್ರೀ ಕ್ಷೇತ್ರ ಸಂಕಲಾಪುರ ಮಠದ ಇತಿಹಾಸ ಕುರಿತು ಬರೆದಿರುವ ಗುರುಕಾರುಣ್ಯ ಕೃತಿಯನ್ನು ಎಂ.ಎಸ್.ನಾಗೇಂದ್ರ ಪ್ರತಿಷ್ಠಾನದ ಸಂಸ್ಥಾಪಕ ಸಿದ್ದೇಶ್ ನಾಗೇಂದ್ರ ಬಿಡುಗಡೆ ಮಾಡಿದರು.

ಕನಕಪುರ ದೇಗುಲ ಮಠದ ಶ್ರೀ ಚನ್ನಬಸವ ಸ್ವಾಮೀಜಿ, ಹಾಸನ ತಣ್ಣೀರುಹಳ್ಳ ಮಠದ ಶ್ರೀ ವಿಜಯಕುಮಾರ ಸ್ವಾಮೀಜಿ, ಕಿರಿಕೊಡ್ಲಿಮಠದ ಶ್ರೀ ಸದಾಶಿವ ಸ್ವಾಮೀಜಿ, ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ, ಬಸವಾಪಟ್ಟಣದ ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮೀಜಿ, ಎವಿಕೆ ಕಾಲೇಜಿನ ಪ್ರಾಂಶುಪಾಲ ಡಾ.ಸೀ.ಚ.ಯತೀಶ್ವರ್, ಕೆ.ಆರ್.ಕಾಂತರಾಜು, ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಆರ್.ಗುರುದೇವ್, ನಾಗರಿಕ ಹೋರಾಟಗಾರ ಸಮಿತಿ ಅಧ್ಯಕ್ಷ ಕೆ.ಎಸ್.ಮಂಜೇಗೌಡ, ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್, ವೀರಶೈವ ಸಂಘದ ಅಧ್ಯಕ್ಷ ರೇಣುಕಾ ಪ್ರಸಾದ್, ಸಮಾಜದ ಹಿರಿಯ ಮುಖಂಡರಾದ ನವಿಲೆ ಪರಮೇಶ್, ಬಿ.ಡಿ.ಬಸವಣ್ಣ, ಪುನೀತ್ ಬನ್ನಳ್ಳಿ, ಅಜಿತ್ ಚಿಕ್ಕಣಗಾಲು, ಶ್ರೀಮಠದ ಕಮಿಟಿ ಅಧ್ಯಕ್ಷ ಎಂ.ಜೆ.ಬಸವಣ್ಣ ಸಿಂಗರವಳ್ಳಿ, ಕಾರ್ಯದರ್ಶಿ ಸಿ.ಎಸ್.ಮಹೇಶ್ ಚಿಕ್ಕೋಟೆ, ಮುಖ್ಯ ಶಿಕ್ಷಕ ಎಚ್.ಜೆ.ಹರೀಶ್ ಉಪಸ್ಥಿತರಿದ್ದರು.

Share This Article

ಸ್ನಾಕ್ಸ್​ ತಿನ್ನುವುದರಿಂದಲೂ ತೂಕ ಇಳಿಸಿಕೊಳ್ಳಬಹುದು!: ಈ ಸಿಂಪಲ್​ ಹೆಲ್ತ್​​ ಟಿಪ್ಸ್​ ಫಾಲೋ ಮಾಡಿ.. | Weight Lose

Weight Lose: ಸರಿಯಾದ ಆಯ್ಕೆಗಳೊಂದಿಗೆ ಸ್ನಾಕ್ಸ್ ತಿನ್ನುವುದರಿಂದಲೂ ಕೂಡ ತೂಕ ಇಳಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ…

ತಂದೆಯಾಗಿ ನಿಮ್ಮ ಮಗನಿಗೆ ಕಲಿಸಲೇ ಬೇಕಾದ ವಿಷಯಗಳಿವು…| Dad

Dad: ಈಗಿನ ದಿನಗಳಲ್ಲಿ ಮಕ್ಕಳನ್ನು ಬೆಳೆಸುವುದು ದೊಡ್ಡ ಸವಾಲಾಗಿದೆ. ತಮ್ಮ ಮಕ್ಕಳಿಗೆ ಶಿಕ್ಷಣ, ಶಿಸ್ತು ಮತ್ತು…

ದೇಹದ ಈ ಭಾಗಗಳ ಮೇಲೆ ಅಪ್ಪಿತಪ್ಪಿಯೂ ಟ್ಯಾಟೂ ಹಾಕಿಸಬೇಡಿ..ಅಪಾಯ ಖಂಡಿತ! Tattoo

Tattoo: ಇತ್ತೀಚಿನ ದಿನಗಳಲ್ಲಿ ಟ್ಯಾಟೂ ಹಾಕಿಸಿಕೊಳ್ಳುವುದು ಫ್ಯಾಷನ್  ಆಗಿದೆ. ಹುಡುಗರಿಂದ ಹಿಡಿದು ಹುಡುಗಿಯರವರೆಗೆ ಎಲ್ಲರೂ ತಮ್ಮ…