ಬ್ಯಾಂಕ್ ದರೋಡೆ ಕೋರರ ಬಂಧನ

blank

ಬಾಗಲಕೋಟೆ: ವಿವಿಧ ಬ್ಯಾಂಕ್‌ಗಳ ಬೀಗ ಮುರಿದು ಚಿನ್ನ, ನಗದು ದೋಚಲು ಪ್ರಯತ್ನಿಸಿದ್ದ ದರೋಡೆ ಕೋರರ ಗ್ಯಾಂಗ್ ಬಂಽಸುವಲ್ಲಿ ಬಾಗಲಕೋಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಾಗಲಕೋಟೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಳ್ಳತನ, ಬ್ಯಾಂಕ್ ದರೋಡೆ ಪ್ರಯತ್ನದ ಪ್ರಕರಣಗಳು ನಡೆದಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿಗಳ ನಿರ್ದೇಶನ ಮೇರೆಗೆ ಕಳ್ಳರ ದಸ್ತಗಿರಿಗೆ ನಾಕಾಬಂದಿ ಹಾಕಲಾಗಿತ್ತು. ಈ ಸಂದರ್ಭದಲ್ಲಿ ಬಾಗಲಕೋಟೆ ತಾಲೂಕಿನ ರಾಂಪುರ ಕೆವಿಜಿಬಿ ಬ್ಯಾಂಕಿನ ಬೀಗ ಮುರಿದು ಬಂಗಾರ, ಹಣ ದೋಚಲು ಪ್ರಯತ್ನಿಸಿದ್ದ ಹಾಗೂ ಶಿರೂರಿನ ಕೆನರಾ ಬ್ಯಾಂಕ್ ದರೋಡೆಗೆ ಹೊರಟಿದ್ದ ಕಳ್ಳರ ತಂಡ ಬೇಟೆಯಾಡಿದ್ದಾರೆ.

ಡಿ.೧೧ ರಂದು ಗ್ರಾಮೀಣ ಸಿಪಿಐ ನೇತೃತ್ವದಲ್ಲಿ ಪಿಎಸ್‌ಐ ಶರಣಬಸಪ್ಪ ಸಂಗಳದ ಹಾಗೂ ಸಿಬ್ಬಂದಿಯವರು ರಾತ್ರಿ ಹೊನ್ನಾಕಟ್ಟಿ ಕ್ರಾಸ್ ಬಳಿ ನಾಕಾ ಬಂದಿ ಕರ್ತವ್ಯ ನಡೆಸುತ್ತಿದ್ದಾಗ ಮಧ್ಯರಾತ್ರಿ ೧.೨೫ ಗಂಟೆಗೆ ಬಾಗಲಕೋಟೆ ನವನಗರದ ಕಡೆಯಿಂದ ಬಂದ ಕಾರು ತಪಾಸಣೆ ನಡೆಸಲಾಗಿತ್ತು, ಅದರಲ್ಲಿ ಅಕ್ಷಿಜನ್ ಸಿಲಿಂಡರ್, ಅಡುಗೆ ಅನಿಲದ ಸಿಲಿಂಡರ್, ಗ್ಯಾಸ್ ಕಟ್ಟರ್, ಕಾರದ ಪುಡಿ, ಕಬ್ಬಿನದ ರಾಡ್ ಸೇರಿ ವಿವಿಧ ವಸ್ತುಗಳು ಕಂಡು ಬಂದವು. ಈ ಸಂದರ್ಭದಲ್ಲಿ ಕಾರಿನಲ್ಲಿದ್ದ ೫ ಜನರಲ್ಲಿ ಇಬ್ಬರು ಓಡಿ ಹೋಗಿದ್ದರು. ಮೂವರನ್ನು ವಶಕ್ಕೆ ಪಡೆಯಲಾಗಿತ್ತು. ವಿಚಾರಣೆಗೆ ಒಳಪಡಿಸಿದಾಗ ವಿಜಯಪುರದ ಭರತ ಅಗರವಾಲ ದುಷ್ಪರೇಣೆಯಿಂದ ಶಿರೂರ ಕೆನರಾ ಬ್ಯಾಂಕ್ ಶಿರೂರ ಕೆನರಾ ಬ್ಯಾಂಕ್ ದರೋಡೆಗೆ ಹೊರಟಿದ್ದೇವೆ ಅಂತ ಒಪ್ಪಿಕೊಂಡಿದ್ದಾರೆ.

ಇನ್ನು ಆರೋಪಿತರನ್ನು ಮತ್ತಷ್ಟು ವಿಚಾರಿಸಲಾಗಿ ತಾವು ೮ ಜನ ಸೇರಿ ಕಳೆದ ಅ.೨೪ ರ ರಾತ್ರಿ ರಾಂಪುರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಬೀಗ ಮುರಿದು ಬಂಗಾರ ಮತ್ತು ಹಣ ದೋಚಲು ಯತ್ನಿಸಿದ್ದಾಗಿ ತಿಳಿಸಿದ್ದಾರೆ.

ವಿಜಯಪುರದ ತನ್ವೀರ ಹುಸೇನಬಾಷಾ ಹೊನ್ನುಟಗಿ(೨೯), ರಮೇಶ ಲಕ್ಷ÷್ಮಣ ಕಾಳೆ(೫೭), ಪುಣೆಯ ವಸೀಂ ಮಸೂದ ಶೇಖ(೨೯) ಅವರನ್ನು ವಶಕ್ಕೆ ಪಡೆಯಲಾಗಿದ್ದು, ಬಾಗಲಕೋಟೆ ನವನಗರದ ಚಾಂದಬಾಷಾ ಕಾಸೀಂಸಾಬ ಚಿತ್ತಾಪುರ, ನಿತೇಶ ಅಲಿಯಾಸ್ ನಿತ್ಯಾ ಸದಾನಂದ ನೀಲವಾಣಿ ಪರಾರಿಯಾಗಿದ್ದಾರೆ.

ವಿಜಯಪುರದ ಭರತ ಸತ್ಯನಾರಾಯಣ ಅಗರವಾಲ ಸಹ ಪರಾರಿಯಾಗಿದ್ದಾನೆಂದು ಹೇಳಿರುವ ಪೊಲೀಸರು, ರಾಂಪುರ ಬ್ಯಾಂಕ್ ಪ್ರಕರಣದಲ್ಲಿನ ಆರೋಪಿತರಾದ ಬೆನಕಟ್ಟಿಯ ಹುಲಗಪ್ಪ ಗಂಗಪ್ಪ ಪಾತ್ರೋಟಿ, ರಾಂಪುರದ ನಾಗೇಶ ಊರ್ಫ ನಾಗ್ಯಾ ರಾಜಪ್ಪ ಇಂಗಳೆ ಸೇರಿ ೮ ಜನರ ಗ್ಯಾಂಗ್ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಅಪರಾಧ ಮಾಡಿರುವುದು ತಿಳಿದು ಬಂದಿದೆ ಎಂದು ಹೇಳಿದ್ದಾರೆ.

ಬಾಗಲಕೋಟೆ ಗ್ರಾಮೀಣ ಸಿಪಿಐ ಎಚ್.ಆರ್.ಪಾಟೀಲ ನೇತೃತ್ವದಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿ ಕಳ್ಳರ ತಂಡ ಬಂಽಸುವಲ್ಲಿ ಶ್ರಮವಹಿಸಿದ ಗ್ರಾಮೀಣ ಪಿಎಸ್‌ಐ ಶರಣಬಸಪ್ಪ ಸಂಗಳದ, ಸಿಬ್ಬಂದಿಗಳಾದ ಎಎಸ್‌ಐ ಎಂ.ಬಿ.ಬಳಬಟ್ಟಿ, ಎಂ.ಎA.ಸೋಲಾಪುರ, ಎಸ್.ಎಸ್.ನಡಗೇರಿ,ಎ.ಎಸ್.ಕಪಲಿ, ಪಿ.ವೈ.ಸೋರಕಟ್ಟಿ, ಎಂ.ಬಿ.ಗಣಾಚಾರಿ, ಎಂ.ಎಸ್.ಬೆAಡಿಗೇರಿಮಠ, ಪಿ.ಎಸ್.ಪಾಟೀಲ, ದುಂಡಪ್ಪ ಕಟಗೇರಿ, ಶಿವಯ್ಯ ಹಿರೇಮಠ,ಎನ್.ಎಂ.ಗುರಾಣಿ,ಕರಿಯಪ್ಪ ಮಗಡಾರ ಕಾರ್ಯಕ್ಷಮತೆಯನ್ನು ಪ್ರಶಂಸೆ ವ್ಯಕ್ತಪಡಿಸಿ ಎಸ್ಪಿ ಅಮರನಾಥ ರೆಡ್ಡಿ ಬಹುಮಾನ ಘೋಷಣೆ ಮಾಡಿದ್ದಾರೆ.

 

Share This Article

ಕಡಿಮೆ ಸಮಯದಲ್ಲಿ ಮನೆಯಲ್ಲೇ ಮಾಡಿ ರುಚಿಕರ ಆಲೂಪೂರಿ; ಇಲ್ಲಿದೆ ಸುಲಭ ವಿಧಾನ | Recipe

ದಿನ ನಿತ್ಯ ಒಂದೇ ರೀತಿಯ ಬೆಳಗ್ಗಿನ ತಿಂಡಿ ತಿಂದು ಬೇಸರವಾಗಿರುತ್ತದೆ. ಆದರೆ ಏನಾದರೂ ವಿಶೇಷವಾದ ಬ್ರೇಕ್​ಫಾಸ್ಟ್​…

ಉಗುರಿನಲ್ಲಿ ಅಡಗಿದೆ ನಿಮ್ಮ ಆರೋಗ್ಯದ ರಹಸ್ಯ; ಹೇಗೆ ಅಂತೀರಾ.. ಈ ಮಾಹಿತಿ ನೋಡಿ | Health Tips

ಒಬ್ಬ ವ್ಯಕ್ತಿಯನ್ನು ನೋಡುವ ಮೂಲಕ ಅವನ ಬಗ್ಗೆ ಬಹಳಷ್ಟು ಹೇಳಬಹುದು. ಆದರೆ ಉಗುರುಗಳು ನಿಮ್ಮ ಆರೋಗ್ಯದ…

ಬೆಟ್ಟದ ನೆಲ್ಲಿಕಾಯಿ- ಅಲೋವೆರಾ ಕೂದಲಿನ ಆರೈಕೆಗೆ ಯಾವುದು ಬೆಸ್ಟ್​​; ಇಲ್ಲಿದೆ ಹೆಲ್ತಿ ಮಾಹಿತಿ | Health Tips

ಹುಡುಗನಾಗಲಿ ಅಥವಾ ಹುಡುಗಿಯಾಗಲಿ ಇಬ್ಬರಿಗೂ ತಮ್ಮ ಕೂದಲಿನ ಬಗ್ಗೆ ಹೆಚ್ಚು ಕಾಳಜಿ ಇರುತ್ತದೆ. ಪ್ರಸಕ್ತ ಜೀವನಶೈಲಿ,…